Site icon Suddi Belthangady

ಕಡಿರುದ್ಯಾವರ ಗ್ರಾ.ಪಂ. ನೂತನ ಕಟ್ಟಡ “ಗ್ರಾಮ ಛಾವಡಿ” ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ

ಕಡಿರುದ್ಯಾವರ : ಇಲ್ಲಿಯ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ಗ್ರಾಮ ಛಾವಡಿ ಇದರ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮವು ಫೆ. 4 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸೋಲಾರ್ ವಿದ್ಯುತ್ ಘಟಕ , ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ , ಅಮೃತ ಉದ್ಯಾನವನದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಗ್ರಾಮ ಪಂಚಾಯತ್ ಕಛೇರಿ ಕಟ್ಟಡ ,ಕಾಂಕ್ರೀಟ್ ರಸ್ತೆ ಉದ್ಘಾಟನೆ ಹಾಗೂ ಇಂಟರ್‌ಲಾಕ್ ಉದ್ಘಾಟನೆಯನ್ನು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ನೆರವೇರಿಸಿ, ಶುಭಹಾರೈಸಿದರು.

ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷ ಅಶೋಕ್ ಕುಮಾರ್ ವಹಿಸಿದರು.


ಮುಖ್ಯ ಅತಿಥಿಗಳಾಗಿ ತಾ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ ಬಿ, ಬಂಗಾಡಿ ಸಿಎ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್, ಇಂಜಿನಿಯರ್ ಹರ್ಷಿತ್, ಕಡಿರುದ್ಯಾವರ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಬೇಬಿ, ಪಂ.ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಎಚ್.ಬಿ, ಕಾರ್ಯದರ್ಶಿ ಜನಾರ್ದನ ಗೌಡ, ಹಾಗೂ ಗ್ರಾ.ಪಂ. ಸದಸ್ಯರು, ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಹಿಪ್-ಬಾಯ್ಸ್ ಡ್ಯಾನ್ಸ್ ತಂಡ, ಉಜಿರೆ ಇವರಿಂದ ಗಾನ ನೃತ್ಯ ವೈಭವ ನಡೆಯಿತು. ತಾಲೂಕು ಪಂಚಾಯತ್ ಜಯಾನಂದ ನಿರೂಪಿಸಿದರು.

Exit mobile version