Site icon Suddi Belthangady

ಅಂಗನವಾಡಿ ಕಾರ್ಯಕರ್ತರ ಹೋರಾಟ ಗೆಲುವಿಗೆ ಸಿ ಐ ಟಿಯು ವಿಜಯೋತ್ಸವ

ಬೆಳ್ತಂಗಡಿ : ಸಿ ಐ ಟಿ ಯು ಸಂಘಟನೆ ನೇತೃತ್ವ ದಲ್ಲಿ ಅಂಗನವಾಡಿ ಕಾರ್ಯಕರ್ತರು ವಿವಿಧ ಬೇಡಿಕೆಗೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಜ.23 ರಿಂದ ನಡೆಸಿದ ಅನಿರ್ಧಿಷ್ಟ ಮುಷ್ಕರಕ್ಕೆ ಸರಕಾರದ ಕೆಲವು ಬೇಡಿಕೆ ಈಡೇರಿಸುವ ಭರವಸೆಯ ಮೇರೆಗೆ ಫೆ.1ರಂದು ಮುಕ್ತಾಯಗೊಂಡಿತು. ಇದರ ಪ್ರಯುಕ್ತ ವಿಜಯೋತ್ಸವವನ್ನು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಫೆ.3 ರಂದು ಅಂಗನವಾಡಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚಾರಿಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಬಿ. ಎಂ. ಭಟ್ ಮಾತನಾಡಿದರು ಅಂಗನವಾಡಿ ಕಾರ್ಯಕರ್ತರು ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.

Exit mobile version