Site icon Suddi Belthangady

ಮಾಯ ಸ್ಟ್ರೈಕರ್ಸ್ ಇವರಿಂದ ಮಾಯಾ ಶಾಲೆಗೆ ದೇಣಿಗೆ

ಬೆಳಾಲು : ಮಾಯಾ ಸ್ಟ್ರೈಕರ್ಸ್ ಮಾಯ ಸಂಘಟನೆಯಿಂದ ಇತ್ತೀಚೆಗೆ ಮಾಯಾ ಮಹಾದೇವ ದೇವಸ್ಥಾನದ ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರೊ. ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಉಳಿಕೆಯಾದ ರೂ.10,002/ ನ್ನು ಸ.ಉ.ಪ್ರಾ.ಶಾಲೆ ಮಾಯ ಇದರ ಅಭಿವೃದ್ಧಿಗಾಗಿ ನೀಡಿದರು.
ಮಾಯ ಸ್ಟ್ರೈಕರ್ಸ್ ಅಧ್ಯಕ್ಷ ಸಂತೋಷ್ ಕನಿಕ್ಕಿಲ, ಕಾರ್ಯದರ್ಶಿ ಮಾಧವ ಗೌಡ ಓಣಾಜೆ,ಉಪಾಧ್ಯಕ್ಷ ಶಶಿಧರ ಆಚಾರ್ಯ ,ಕೋಶಾಧಿಕಾರಿ ಗಣೇಶ್ ಕನಿಕ್ಕಿಲ, ಸಂಚಾಲಕ ಶಶಿಧರ ಶಿಲ್ಪಿ, ಸಂಯೋಜಕ ಧರ್ಮೇಂದ್ರ ಕುಮಾರ್ ಸೇರಿದಂತೆ ಹಲವು ಸದಸ್ಯರು ಶಾಲೆಗೆ ಭೇಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಂದ್ರ ಗೌಡ ಸುರುಳಿ ಹಾಗೂ ಮುಖ್ಯೋಪಾಧ್ಯಾ ವಿಠಲ್ ಎಂ. ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Exit mobile version