Site icon Suddi Belthangady

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಮಹಾಗಣಪತಿ ಬಿಂಬ ಸಮರ್ಪಣೆ

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಅಳದಂಗಡಿ ಇದರ ಬ್ರಹ್ಮಕಲಶೋತ್ಸವ ಫೆ 4 ರಿಂದ 9ರವರೆಗೆ ನಡೆಯಲಿದ್ದು ಮಹಾಗಣಪತಿ ಬಿಂಬವನ್ನು ಶ್ರೀ ಕ್ಷೇತ್ರ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆಯವರು ಸಮರ್ಪಿಸಿದರು.

ಕಾರ್ಕಳದಲ್ಲಿ ಸಚಿವ ಸುನಿಲ್ ಕುಮಾರ್ ಬಿಂಬ ಹಸ್ತಾಂತರಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ಶಶಿಧರ ಡೋಂಗ್ರೆ, ಪ್ರಧಾನ ಆರ್ಚಕ ಸೋಮನಾಥ ಮಯ್ಯ,ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ,ಸ್ವಾಗತ ಸಮಿತಿ ಅದ್ಯಕ್ಷ ಶಿವಪ್ರಸಾದ್ ಅಜಿಲ, ಸುರೇಶ್ ಶೆಟ್ಟಿ, ಸದಾನಂದ ನಾವರ,ಪ್ರಮುಖರಾದ ಯೋಜನೆಯ ಯೋಜನಾಧಿಕಾರಿ ಯಶವಂತ್ ಎಸ್, ಪಿ.ಹೆಚ್.ನಿತ್ಯಾನಂದ ಶೆಟ್ಟಿ,ಸದಾನಂದ ನಾವರ, ಸುಧೀರ್ ಸುವರ್ಣ, ನವೀನ್ ಸಾಮಾನಿ, ಉಮೇಶ್ ಸುವರ್ಣ,ಚಂದ್ರಶೇಖರ್ ಮಹಾಗಣಪತಿ,ವಿಶ್ವನಾಥ ಬಂಗೇರ, ಸಿಪ್ರಿತ್ ಜೈನ್, ವಿಜಯ್ ಜೈನ್ ಹಾಗೂ ಊರವರು ಉಪಸ್ಥಿತರಿದ್ದರು.

ವೈಭವ ಮೆರವಣಿಗೆಯ ಮೂಲಕ ಗಣಪತಿ ಬಿಂಬವನ್ನು ತರಲಾಯಿತು.

Exit mobile version