Site icon Suddi Belthangady

ಕುಕ್ಕಳ ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನದ ಮಾತೃ ಸಂಘದ ರಚನೆ

ಪುಂಜಾಲಕಟ್ಟೆ : ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನ ಕುಕ್ಕಳ ಗ್ರಾಮ ಪುಂಜಾಲಕಟ್ಟೆ ಇದರ ಮಾತೃ ಸಂಘದ ರಚನೆ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ಜ.19ರಂದು ನಡೆಯಿತು.

ಅಧ್ಯಕ್ಷರಾಗಿ ಶ್ರೀಮತಿ ಯಶೋಧ ಬಿ. ವಿ., ಉಪಾಧ್ಯಕ್ಷರಾಗಿ ಶ್ರೀಮತಿ ರೇಖಾ ಎ ಶೆಟ್ಟಿ ಹಾಗೂ ಶ್ರೀಮತಿ ನಾಗವೇಣಿ ಪಿ ಆಚಾರ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಬೇಬಿ ರೇಖಾ ಶೆಟ್ಟಿ ಅನಿಲಡೆ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಶಕುಂತಲಾ ಯೋಗಿಶ್, ಕೋಶಾಧಿಕಾರಿಯಾಗಿ ಶ್ರೀಮತಿ ಗೀತಾ ಕೆ ಆಚಾರ್ಯ, ಸದಸ್ಯರಾಗಿ ಶ್ರೀಮತಿ ಉಮಾ ಡಿ. ಗೌಡ, ಶ್ರೀಮತಿ ಶಶಿಪ್ರಭ, ಶ್ರೀಮತಿ ಪಾರ್ವತಿ, ಶ್ರೀಮತಿ ರೂಪಾ ಡಿ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ರೇಣುಕ ವೈ ಆಚಾರ್ಯ, ಶ್ರೀಮತಿ ಭವ್ಯ ಪ್ರವೀಣ್, ಶ್ರೀಮತಿ ರೇವತಿ, ಶ್ರೀಮತಿ ಲೀಲಾ ನಟರಾಜ್, ಆಯ್ಕೆಯಾದರು.

ಈ ಸಂದರ್ಭದಲ್ಲಿ ದೇವಸ್ಥಾನದ ನೂತನ ಅಧ್ಯಕ್ಷ ಪ್ರಶಾಂತ್ ಎಂ, ಕಾರ್ಯದರ್ಶಿ ಧರ್ಣಪ್ಪ ಗೌಡ. ಹಾಗೂ ಇತರ ಸದಸ್ಯರುಗಳು ಸಂಪೂರ್ಣ ಸಹಕಾರವನ್ನು ನೀಡಿದರು.

Exit mobile version