Site icon Suddi Belthangady

ಕಳಿಯ ಶೇಷಗಿರಿ ಕೊಜಪ್ಪಾಡಿ ಶ್ರೀ ವಾಸುಕೀ ನಾಗಬ್ರಹ್ಮ ದೇವರ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಡಾ.ಡಿ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಳಿಯ: ಶೇಷಗಿರಿ ಕೊಜಪ್ಪಾಡಿಯಲ್ಲಿ ನಿರ್ಮಿಸಿದ ನವೀಕೃತ ಶಿಲಾಮಯ ನಾಗ ಮಂಟಪದಲ್ಲಿ ಶ್ರೀ ವಾಸುಕೀ ನಾಗಬ್ರಹ್ಮ ದೇವರ ಪುನಃಪ್ರತಿಷ್ಠ ಬ್ರಹ್ಮಕಲಶೋತ್ಸವ ,ನಾಗದರ್ಶನ ಫೆ. 9 ಮತ್ತು 10 ರಂದು ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ನಾಗಬ್ರಹ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ ಐಸಿರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ, ಉಪಾಧ್ಯಕ್ಷರಾದ ದಿವಾಕರ್ ಎಂ, ಸತೀಶ್ ಪೂಜಾರಿ, ಟ್ರಸ್ಟ್ ಕಾರ್ಯದರ್ಶಿ ಮಹೇಶ್, ವಿವಿಧ ಸಮಿತಿ ಪದಾಧಿಕಾರಿಗಳಾದ ಕವನ್ ಕುಲಾಲ್, ಗೋಪಾಲ್ ಪೂಜಾರಿ, ರಾಜೇಶ್ ಸಫಲ್ಯ, ಶೇಖರ್, ಜಯರಾಮ್ ಆಚಾರ್ಯ, ಸೌಮ್ಯ, ವಿಜಯಲಕ್ಷ್ಮಿ, ಅನುಷಾ, ನಿಕ್ಷೀತಾ, ಶೋಭಾ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version