Site icon Suddi Belthangady

ಅಮರ್ ಜಾಲು ಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಕೋಲ

ಓಡಿಲ್ನಾಳ : ಇಲ್ಲಿಯ ಅಮರ್ ಜಾಲು ಕೊರಗಜ್ಜ ಸನ್ನಿಧಿಯಲ್ಲಿ ಭಕ್ತರಿಂದ ಜ.14 ರಂದು ಹರಕೆ ಕೋಲ ಮತ್ತು ಮಕರಸಂಕ್ರಾಂತಿಯಂದು ರಾತ್ರಿ ಹರಕೆ ಕೋಲ ನಡೆಯಿತು. ಸೇವಾ ಕರ್ತರಾದ ಸುಲ್ಕೇರಿಮೊಗ್ರು ಮಂತ್ಯೋಲು ಆಶೋಧರ ನಲ್ಲಾರು, ಸಾವಿತ್ರಿ ಎಂ.ಅಕ್ಷರ ಎ.ಎಸ್ ಮತ್ತು ಗರ್ಡಾಡಿ ರನ್ನಾಡುಪಲ್ಕೆ ಮನೆಯವರಾದ ಕೆ.ಕೃಷ್ಣಪ್ಪ ಪೂಜಾರಿ ಗುರು ಸ್ವಾಮಿ ಯವರಿಂದ ಹರಕೆ ಕೋಲ ಜರುಗಿತು.


ಈ ಸಂದರ್ಭದಲ್ಲಿ ದೈವದ ಮಧ್ಯಸ್ಥರು, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಅಗೇಲು ಮತ್ತು ಗಂಧ ಪ್ರಸಾದ ಪಡೆದರು.
ಅಮರ್ ಜಾಲು ದೈವಸ್ಥಾನದ ವ್ಯವಸ್ಥಾಪಕ ರವಿ ಪೂಜಾರಿ ಮತ್ತು ಮನೆಯವರು ಉಪಸ್ಥಿತರಿದ್ದರು. ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

Exit mobile version