Site icon Suddi Belthangady

ಇಚ್ಚೂರು ಬಾಲಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗ್ರಾಮ ಸುಭೀಕ್ಷೆಗಾಗಿ ಸಿಯಾಳಾಭಿಷೇಕ ಹಾಗೂ ಸ್ವಚ್ಚತಾ ಕಾರ್ಯ

ಇಳಂತಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೇಜಿಕಾರು ಒಕ್ಕೂಟದ ವತಿಯಿಂದ ಗ್ರಾಮ ದೇವರು, ಉದಕಮಣಿ ಕ್ಷೇತ್ರ ಶ್ರೀ ಇಚ್ಚೂರು ಬಾಲಸುಬ್ರಮಣ್ಯ ಕ್ಷೇತ್ರದಲ್ಲಿ ಗ್ರಾಮ ಸುಭೀಕ್ಷೆಗಾಗಿ ಸಿಯಾಳಭಿಷೇಕ ಸೇವೆ ಮತ್ತು ಶೃದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಕಣಿಯೂರು ವಲಯಾಧ್ಯಕ್ಷ ರಮಾನಂದ ಪೂಜಾರಿ, ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾ, ಸೇವಾ ಪ್ರತಿನಿಧಿ ಶ್ರೀಮತಿ ಜಾನಕಿ, ನೇಜಿಕಾರು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

Exit mobile version