Site icon Suddi Belthangady

ಅಂಬ್ಯುಲೆನ್ಸ್ ಚಾಲಕ ಪದ್ಮನಾಭ ಕುಲಾಲ್ ಬಳಂಜರವರಿಗೆ ಸನ್ಮಾನ

ಸುಲ್ಕೇರಿ: ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಸುಲ್ಕೇರಿ ವತಿಯಿಂದ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಬಳಂಜದ ವೀರಕೇಸರಿ ಅಂಬ್ಯುಲೆನ್ಸ್ ಚಾಲಕ, ಯುವ ಸಂಘಟಕ, ಸಮಾಜ ಸೇವಕ ಪದ್ಮನಾಭ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.

ಪದ್ಮನಾಭ ಕುಲಾಲ್ ರವರು ಹಲವಾರು ವರ್ಷಗಳಿಂದ ಅಂಬ್ಯುಲೆನ್ಸ್ ಚಾಲಕರಾಗಿ, ಅಪದ್ಬಾಂಧವರಾಗಿ ಹಲವಾರು ಜೀವಗಳನ್ನು ಉಳಿಸುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ. ವೀರಕೇಸರಿ ಹಿಂದೂಪರ ಸಂಘಟನೆಯನ್ನು ಕಟ್ಟಿ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.

Exit mobile version