Site icon Suddi Belthangady

ಇಂದಬೆಟ್ಟು: ಕರುವಲ್ಲ ಕಲ್ಲಗುಂಡ ಬಾಲಾಲಯದಲ್ಲಿ ಉಳ್ಳಾಕುಳ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ

ಇಂದಬೆಟ್ಟು: ಬಂಗಾಡಿ ಸೀಮೆಯ ಧರ್ಮ ದೇವತೆಗಳಾದ ಉಳ್ಳಾಕುಳ ಮೂಲಸ್ಥಾನ ಕರುವಲ್ಲ ಕಲ್ಲಗುಂಡ ಇದರ ಜೀರ್ಣೋದ್ದಾರದ ಬಗ್ಗೆ ಪರಿಹಾರ ಕರ್ಮಾಂಗ ಮತ್ತು ಬಾಲಾಲಯದಲ್ಲಿ ಉಳ್ಳಾಕುಳ ಹಾಗೂ ಪರಿವಾರ ದೈವಗಳ ಪ್ರತಿಷ್ಠೆಯು ಜ.8ರಿಂದ ಜ. 11ರ ವರೆಗೆ ಜರುಗಿತು.


ಜ.8 ರಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡು ಜ.11ರಂದು ಬೆಳಿಗ್ಗೆ 108ಕಾಯಿ ಗಣಹೋಮ, ಪೂರ್ವಾಹ್ನ ಮೀನ ಲಗ್ನದಲ್ಲಿ ಬಾಲಾಲಯದಲ್ಲಿ ಉಳ್ಳಾಕುಳ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರುಗಿತು.

Exit mobile version