ಉಜಿರೆ: ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆ “ಸಮೂಹ ಉಜಿರೆ “ಆಶ್ರಯದಲ್ಲಿ ನೀನಾಸಂ ತಿರುಗಾಟ -2023 ರ ನಾಟಕಗಳು ಉಜಿರೆಯ ಎಸ್ .ಡಿ.ಎಂ.ಕಾಲೇಜು ಕ್ರೀಡಾಂಗಣ ಬಳಿಯ “ವನರಂಗ “ಬಯಲು ರಂಗಮಂದಿರದಲ್ಲಿ ಸಂಜೆ 6.30 ರಿಂದ ಪ್ರದರ್ಶಿಸಲ್ಪಡಲಿದೆ. ಜ.12 ರಂದು ಸಂಜೆ ಯೂರಿಪಿಡೀಸ್ ರಚಿಸಿ, ಮಾಧವ ಚಿಪ್ಪಳಿ ಕನ್ನಡಕ್ಕೆ ಅನುವಾದಿಸಿ ವೆಂಕಟ್ರಮಣ ಐತಾಳ ನಿರ್ದೇಶನದ “ಇಫಿಜೀನಿಯಾ ” ಮತ್ತು ಜ.13 ರಂದು ಸಂಜೆ ರವೀಂದ್ರನಾಥ ಟಾಗೋರ್ ರಚಿಸಿ ಅಹೋಬಲ ಶಂಕರ ಕನ್ನಡಕ್ಕೆ ಅನುವಾದಿಸಿ ಪ್ರವೀಣ್ ಕುಮಾರ್ ಎಡಮಂಗಲ ನಿರ್ದೇಶಿಸಿದ “ಮುಕ್ತಧಾರಾ “ನಾಟಕಗಳು ಪ್ರದರ್ಶನಗೊಳ್ಳಲಿದೆ.
ಜ.12-13: ಉಜಿರೆಯಲ್ಲಿ ನೀನಾಸಂ ತಿರುಗಾಟ- ನಾಟಕ ಪ್ರದರ್ಶನ
![](https://belthangady.suddinews.com/wp-content/uploads/2023/01/WhatsApp-Image-2023-01-11-at-10.17.51-AM-1.jpeg)