Site icon Suddi Belthangady

ಲಾಯಿಲ: ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿರವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಗುರುವಂದನೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಲಾಯಿಲ: ಪುತ್ತೂರು ದ.ಕ ಇಲ್ಲಿ ನಡೆಯಲಿರುವ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಗುರುವಂದನೆ ಕಾರ್ಯಕ್ರಮದ ಪೂರ್ವಭಾವಿಯ ಸಭೆಯ ಸಾನ್ನಿಧ್ಯವನ್ನು ಮಂಗಳೂರು ಶಾಖಾಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಯವರು ಲಾಯಿಲದಲ್ಲಿರುವ ಸಂಗಮ ಸಭಾಭವನದಲ್ಲಿ ಜ.8 ರಂದು ವಹಿಸಿದ್ದರು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮಾಜದ ಮುಖಂಡರಾದ ಮಾಜಿ ಸಚಿವ ಗಂಗಾಧರ ಗೌಡ , ಕುಶಾಲಪ್ಪ ಗೌಡ ಪೂವಾಜೆ , ವಿಶ್ವನಾಥ ಗೌಡ , ಪದ್ಮಯ್ಯ ಗೌಡ , ಬಾಲಕೃಷ್ಣ ಗೌಡ ಕೇರಿಮಾರ್ , ಜಯಾನಂದ ಗೌಡ , ಗಣೇಶ್ ಗೌಡ , ಭಾಸ್ಕರ ದೇವಸ್ಯ , ಧರ್ಮಣ್ಣ ಗೌಡ , ಕಿರಣ್ ಬುಡ್ಲೇಗುತ್ತು ಮುಂತಾದವರು ಉಪಸ್ಥಿತರಿದ್ದರು.

Exit mobile version