Site icon Suddi Belthangady

ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಕೃಷ್ಣಪ್ಪ ನಾಯ್ಕ ನಿಧನ

ಕಳಿಯ: ಇಲ್ಲಿಯ ಮಲ್ಲೊಟ್ಟು ಬೆದ್ರಫಲ್ಕೆ ನಿವಾಸಿ ಕೃಷ್ಣಪ್ಪ ನಾಯ್ಕ್ ರವರು ಡಿ.20 ರಂದು ತನ್ನ ಅಣ್ಣನ ದಫನ ಕಾರ್ಯ ಮುಗಿಸಿ ರಾತ್ರಿ ಸುಮಾರು 8.30 ಸಮಯದಲ್ಲಿ ಉಜಿರೆಯಿಂದ ಬೆಳ್ತಂಗಡಿಗೆ ಆಟೋ ರಿಕ್ಷಾದಲ್ಲಿ ಬರುವಾಗ ಉಜಿರೆ ಕಾಶಿಬೆಟ್ಟು ಬಳಿ ಮಂಗಳೂರಿನಿಂದ ಧರ್ಮಸ್ಥಳದ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿಸಿ. ಬಸ್ಸು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಕೃಷ್ಣಪ್ಪ ರವರ ಎದೆಯ ಭಾಗಕ್ಕೆ ತೀವ್ರ ಗಾಯವಾಗಿದ್ದು ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.24 ರಂದು ನೋವು ತೀವ್ರವಾಗಿ ಹೃದಯಾಘಾತದಿಂದ ಕೋಮಾಕ್ಕೊಳಗಾದ ಇವರನ್ನು ಮಂಗಳೂರಿನಲ್ಲಿ KMC ಅತ್ತಾವರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವರು ಜ.2ರಂದು ಬೆಳಗ್ಗೆ ನಿಧನರಾದರು.

ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Exit mobile version