Site icon Suddi Belthangady

ಉಜಿರೆಯಲ್ಲಿ ಅನುಗ್ರಹ ಸ್ಟೀಲ್ ಮೆಟಲ್ಸ್ ಶುಭಾರಂಭ

ಉಜಿರೆ : ಅನುಗ್ರಹ ಶಾಲಾ ಎದುರು ಅನುಗ್ರಹ ಸ್ಟೀಲ್ & ಮೆಟಲ್ ಜ.1ರಂದು ಶುಭಾರಂಭ ಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಯು. ಶರತ್ ಕೃಷ್ಣ ಪಡುವೆಟ್ಟುಣ್ಣಯ ದೀಪ ಬೆಳಗಿಸಿ ಉದ್ಘಾಟಿಸಿದರು. ಹುಣಿಪಾಜೆಗುತ್ತು ರತನ್ ಕುಮಾರ್ ಜೈನ್, ಉಜಿರೆ ಸಂತ ಅಂತೋಣಿ ಚರ್ಚ್ ಧರ್ಮಗುರು ವ. ಫಾ. ಜೇಮ್ಸ್ ಡಿಸೋಜ, ಬೆಳ್ತಂಗಡಿ ತಾಲೂಕು ಇಂಜಿನಿಯರ್ ಸಂಘದ ಅಧ್ಯಕ್ಷ ಜಗದೀಶ್ ಪ್ರಸಾದ್ ,ಉದ್ಯಮಿ ಯು. ಎ. ಹಮೀದ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಆರ್ ಶೆಟ್ಟಿ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಎಂ., ಉದ್ಯಮಿ ಮೋಹನ್ ಶೆಟ್ಟಿಗಾರ್ ಮುಖ್ಯ ಅತಿಥಿಯಾಗಿದ್ದರು. ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಶಶಿಧರ್ ಕಳ್ಮಂಜ, ಗ್ರಾಮ ಪಂಚಾಯತ್ ಸದಸ್ಯ ಬದ್ರಯ, ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ನಾರಯಣ ಶೆಟ್ಟಿ, ಶ್ರೀಮತಿ ಗಿರಿಜಾ ಬಾಬು ಶೆಟ್ಟಿ, ಪ್ರದೀಪ್ ಶೆಟ್ಟಿ, ಮಾಲಕ ಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಂಜುನಾಥ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version