Site icon Suddi Belthangady

ತಾಲೂಕಿನಾದ್ಯಂತ ಚರ್ಚ್ ನಲ್ಲಿ ಹೊಸ ವರ್ಷ ಆಚರಣೆ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಾದ್ಯಾಂತ ಹೊಸ ವರ್ಷ ಆಚರಣೆ ಸಂಭ್ರಮ ದಲ್ಲಿ ಆಚರಿಸಲಾಯಿತು. ರಾತ್ರಿ ಎಲ್ಲಾ ಚರ್ಚ್ ಗಳಲ್ಲಿ ವಿಷೇಶ ಆರಾಧನೆ ನಡೆಯಿತು. 2022ರಲ್ಲಿ ಒಳ್ಳೆ ವಿಷಯಗಳು ಮತ್ತು ಕಷ್ಟ ಗಳ ಬಗ್ಗೆ ನೆನಪಿಸಿ ಪ್ರಾರ್ಥನೆ ಸಲ್ಲಿಸಿ ಹೊಸ ವರ್ಷಕ್ಕೇ ಒಳ್ಳೇದನ್ನು ಮಾಡುವಂತೆ ಆರಾಧನೆ, ಪ್ರಾರ್ಥನೆ ಯೊಂದಿಗೆ ವಿಷೇಶ ಪೂಜೆ ಅರ್ಪಿಸಿ ದೇವರಿಗೆ ಕೃತಾಜ್ಞತೆ ಸಲ್ಲಿಸಲಾಯಿತು.

ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ವ. ಫಾ. ಜೇಮ್ಸ್ ಡಿಸೋಜ ಪ್ರಧಾನ ಧರ್ಮ ಬಲಿ ಪೂಜೆ ಅರ್ಪಿಸಿ ಪ್ರವಚನ ನೀಡಿದರು. ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಾಲರು ವ. ಫಾ. ವಿಜಯ್ ಲೋಬೊ ಸಹಕರಿಸಿದರು, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮ ಕೇಂದ್ರ ಗಳಾದ ಬೆಳ್ತಂಗಡಿ, ಇಂದ ಬೆಟ್ಟು, ಮಂಜೊಟ್ಟಿ, ಬದ್ಯರ್, ಮಾವಿನ ಕಟ್ಟೆ, ಮಡಂತ್ಯಾರು, ನೈನಾಡು, ವೇನೂರು, ನಾರಾವಿ, ಅಳದಂಗಡಿ, ಗರ್ಡಡಿ ಬೆಳ್ತಂಗಡಿ ಧರ್ಮಪರಾಂತ್ಯದ ಸಿರೋ ಮಲಬಾರ್ ಚರ್ಚ್ ಗಳಲ್ಲಿ ವಿಷೇಶ ಆರಾಧನೆ, ಪೂಜೆ ನಡೆಯಿತು.

Exit mobile version