Site icon Suddi Belthangady

ಬಳ್ಳಮಂಜದಲ್ಲಿ ಕಿರು ಷಷ್ಠಿ ಮಹೋತ್ಸವ

ಮಚ್ಚಿನ : ತುಳು ನಾಡಿನ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಿ.28ರಂದು ಕಿರು ಷಷ್ಠಿ ಮಹೋತ್ಸವ ನಡೆಯಿತು.

ಬೆಳಿಗ್ಗೆ ಅಂಗ ಪ್ರದಕ್ಷಿಣೆ, ಅಶ್ವಿನಿ ನಾಯಕ್ ಮತ್ತು ಬಳಗ ಪಣಕಜೆ ಇವರಿಂದ ಭಜನಾ ಕಾರ್ಯ್ರಮ, ತುಲಾಭಾರ ಸೇವೆ, ಮಹಾಪೂಜೆ,ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಕಿರು ಷಷ್ಠಿ ಉತ್ಸವ ನಡೆಯಿತು. ಕಾರ್ಯಕ್ರಮ ದಲ್ಲಿ ಭಕ್ತಾದಿಗಳು, ಊರ ಗಣ್ಯರು ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

Exit mobile version