Site icon Suddi Belthangady

ಮುಗೇರಡ್ಕ: ನೇತ್ರಾವತಿ ನದಿಗೆ ಮೀನು ಹಿಡಿಯಲು ಹೋದ ಯುವಕ ನೀರು ಪಾಲು: ಮುಂದುವರೆದ ಶೋಧ ಕಾರ್ಯ

ಮೊಗ್ರು: ಬಂದಾರು ಪಂಚಾಯತ್ ವ್ಯಾಪ್ತಿಯ , ಮೊಗ್ರು ಗ್ರಾಮದ, ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಡಿ.26 ರಂದು ಸಂಜೆ ನಡೆದಿದ್ದು, ರಾತ್ರಿ ವೇಳೆ ಬೆಳಕಿಗೆ ಬಂದಿದೆ.

ನೀರು ಪಾಲಾದ ಯುವಕ ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ವಿವಾಹಿತ ಪುತ್ರ ಜನಾರ್ಧನ ಗೌಡ (42) ಎಂದು ತಿಳಿದುಬಂದಿದೆ.

ರಾತ್ರಿಯಿಂದಲೇ ಅಗ್ನಿಶಾಮಕ ತಂಡ ಹಾಗೂ ಉಪ್ಪಿನಂಗಡಿ ಪೊಲೀಸರ ಮಾರ್ಗದರ್ಶನದಲ್ಲಿ ಮುಳುಗುಪಟುಗಳಿಂದ ಶೋಧ ಕಾರ್ಯ ನಡೆಸಿದ್ದರೂ, ಕಾರ್ಯ ವಿಫಲವಾಗಿದೆ. ಯುವಕನ ಜೊತೆಗಿದ್ದ ಸ್ನೇಹಿತ ಯಾರಿಗೂ ಹೇಳದೆ ಪರಾರಿಯಾಗಿದ್ದಾನೆ. ಬಳಿಕ ರಾತ್ರಿ ಯುವಕನನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

Exit mobile version