Site icon Suddi Belthangady

ಕುತ್ಲೂರು ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾಸಭೆ : ಕಾರ್ಯಕಾರಿ ಸಮಿತಿ ರಚನೆ

ಕುತ್ಲೂರು: ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ,ಮೂಡಬಿದ್ರೆ ಉಪವಿಭಾಗ,ವೇಣೂರು ವಲಯ ಕುತ್ಲೂರು ಗ್ರಾಮ ಅರಣ್ಯ ಸಮಿತಿ ಇದರ ವಾರ್ಷಿಕ ಮಹಾಸಭೆಯ ಮತ್ತು ಕಾರ್ಯಕಾರಿ ಸಮಿತಿ ರಚನೆಯು ಡಿ.17 ರಂದು ಕುತ್ಲೂರು ಮಂಜುಶ್ರೀ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೂಡಬಿದ್ರೆ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಸಹಾಯಕ , ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆಶಾಲತ, ವೇಣೂರು ಹೋಬಳಿ ಕಂದಾಯ ನಿರೀಕ್ಷರು ಸುನಿಲ್ ಕುಮಾರ್, ನಾರಾವಿ ಗ್ರಾಮ ಪಂಚಾಯತ್ ಸದಸ್ಯರು ಸಂತೋಷ್ ಕುಮಾರ್, ನಾರಾವಿ ಗ್ರಾಮ ಕರಣಿಕರು ಅಕ್ಷತ್ ಕುಮಾರ್, ಕಾರ್ಯದರ್ಶಿ ಗ್ರಾಮ ಅರಣ್ಯ ಸಮಿತಿ ಕುತ್ಲೂರು ಕುಶಲಪ್ಪ ಗೌಡ ಇವರುಗಳು ಉಪಸ್ಥಿತರಿದ್ದರು.

ಗ್ರಾಮ ಅರಣ್ಯ ಸಮಿತಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಯಿತು.

ಅಧ್ಯಕ್ಷರಾಗಿ ಶ್ರೀಧರ ಪೂಜಾರಿ ಹಲೆಕ್ಕಿ, ಸದಸ್ಯರು-ಲಿಂಗಪ್ಪ ಎಂ.ಕೆ , ಕೇಶವ ಅನುರಾಧ ನಿವಾಸ, ಯಶೋಧ,ಕರಿಯ ಪೂಜಾರಿ,ರವೀಶ್ ಪಲಯೋಟ್ಟು, ಚಂದ್ರಾವತಿ, ಸಂಜೀವಿ, ಉಷಾ,ರಮೇಶ್ ಆಚಾರ್ಯ, ಯಮುನಾ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

Exit mobile version