Site icon Suddi Belthangady

ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಇದರ ವತಿಯಿಂದ, ರೈತ ದಿನಾಚರಣೆ: ತಾಲೂಕು ಮಟ್ಟದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿಕರಿಗೆ ಸನ್ಮಾನ

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಇದರ ವತಿಯಿಂದ ಡಿ.23ರಂದು ರೈತ ದಿನಾಚರಣೆ ಅಂಗವಾಗಿ ಶಾಖೆಯಲ್ಲಿ ತಾಲೂಕು ಮಟ್ಟದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅದರಲ್ಲಿ ಮುಖ್ಯ ಅತಿಥಿಗಳಾದ ಇಕೋ ಫ್ರೆಶ್ ಎಂಟರ್‌ಪ್ರೈಸಸ್ ನ ಮಾಲೀಕರಾದ ರಾಕೇಶ್ ಶೆಟ್ಟಿ , ವಾಣಿ ಶಾಲಾ ಶಿಕ್ಷಕಯಾದ ವಿದ್ಯಾ ಶ್ರೀನಿವಾಸ್, ಯುವ ನ್ಯಾಯವಾದ ಮೊಹಮ್ಮದ್ ನವಾಜ್ ಇವರು ಕೃಷಿಕರಾದ ಪ್ರಭಾಕರ ಮಯ್ಯ, ಸತೀಶ್ ಗೌಡ, ದೇವಿಪ್ರಸಾದ್, ಚಂದ್ರಹಾಸ ಗೌಡ , ಆನಂದ ಗೌಡ, ಇವರನ್ನು ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶಾಖ ಸಿಬ್ಬಂದಿವರ್ಗ ಹಾಗೂ ಗ್ರಾಹಕರು ಹಾಜರಿದ್ದರು.

Exit mobile version