Site icon Suddi Belthangady

ಕೆ ಎಸ್ ಎಂ ಸಿ ಎ ವತಿಯಿಂದ ಬೆಳ್ತಂಗಡಿ ಯ ವಿವಿಧ ಸರಕಾರಿ ಕಚೇರಿಗಳಲ್ಲಿ ಕ್ರಿಸ್ಮಸ್ ಕೇಕ್ ವಿತರಣೆ


ಬೆಳ್ತಂಗಡಿ : 2022 ರ ಕ್ರಿಸ್ಮಸ್ ಆಚರಣೆಯ ಅಂಗವಾಗಿ ಡಿ.23 ರಂದು ಬೆಳ್ತಂಗಡಿಯ ವಿವಿಧ ಕಚೇರಿ ಸಿಬ್ಬಂದಿಗಳಿಗೆ ಕರ್ನಾಟಕ ಸೀರೋಮಲ ಬಾರ್ ಕ್ಯಾಥೋಲಿಕ್ ಅಶೋಸಿಯೇಷನ್ ನೇತೃತ್ವದಲ್ಲಿ ಕೇಕ್ ವಿತರಿಸಿ ಕ್ರಿಸ್ಮಸ್ ಮತ್ತು ಹೊಸ ವರುಷದ ಶುಭಾಶಯಗಳನ್ನು ಹಾರೈಸಲಾಯಿತು.

ಪುರಸಭಾ ಅಧ್ಯಕ್ಷೆ ರಜನಿ ಕುಡ್ವ ಕೇಕ್ ಕತ್ತರಿಸಿ ಶುಭಾಶಯ ತಿಳಿಸಿದರು. ಬೆಳ್ತಂಗಡಿ ಆರಕ್ಷಕ ಠಾಣೆ, ತಾಲೂಕು ಪಂಚಾಯತ್ ಕಚೇರಿ, ನಗರಸಭೆ ನೋಂದಣಿ ಕಚೇರಿ ಹಾಗೂ ತಾಲೂಕು ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆ ಯ ಎಲ್ಲರಿಗೂ ಕೇಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕೆ ಎಸ್ ಎಂ ಸಿ ಎ ತೋಟತ್ತಾಡಿ ವಲಯ ಅಧ್ಯಕ್ಷ ಸೇಬಾಷ್ಟಿಯನ್ ವಿ ಟಿ , ಕೆ ಎಸ್ ಎಂ ಸಿ ಎ ಪ್ರಧಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ, ಕೆ ಎಸ್ ಎಂ ಸಿ ಎ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೇಬಾಸ್ಟಿನ್ ಪಿ. ಸಿ , ಸ್ಪಂದನ ಕ್ಲೀನಿಕ್ ತೋಟತ್ತಾಡಿ ವಲಯ ದ ಕೆ ಎಸ್ ಎಂ ಸಿ ಎ ಪದಾಧಿಕಾರಿ ಮಲ್ಬಿ ಪಿ ಸಿ ನೆರಿಯ ಗ್ರಾಮ ಪಂಚಾಯತ್ ಸದಸ್ಯ ತೋಮಸ್ ವಿ ಡಿ, ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ನಿರ್ದೇಶಕರಾದ ವಂದನಿಯ ಫಾಧರ್ ಶಾಜಿ ಮಾತ್ಯು ಉಪಸ್ಥಿತರಿದ್ದರು.

Exit mobile version