Site icon Suddi Belthangady

ನ್ಯಾಯತರ್ಪು: ವಂಜಾರೆ ಮನೆ ನಿವಾಸಿ, ಪ್ರಗತಿಪರ ಕೃಷಿಕ ವಿವೇಕ್ ಬಂಗೇರ ನಿಧನ


ನ್ಯಾಯತರ್ಪು : ಇಲ್ಲಿಯ ವಂಜಾರೆ ಮನೆ ನಿವಾಸಿ ವಿವೇಕ್ ಬಂಗೇರ (52 ವರ್ಷ) ಹೃದಯಘಾತದಿಂದ ಡಿ.22 ರಂದು ಸ್ವ ಗೃಹದಲ್ಲಿ ನಿಧನರಾದರು.

ಮೃತರು ಸಾಧು ಸಜ್ಜನ ಸ್ವಭಾವದ, ದೈವ ಭಕ್ತರು, ಕೊಡಗೈದಾನಿಯಾಗಿದ್ದರು. ರಕ್ತೇಶ್ವರಿಪದವು ಶಾಲೆ, ಅಂಗನವಾಡಿ, ಭಜನಾ ಮಂಡಳಿ ದೇವಸ್ಥಾನಗಳಲ್ಲಿ,ಸಮಾಜ ಸೇವೆಗಳ ಮೂಲಕ ಸಕ್ರಿಯವಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು.

ಮೃತರು ಪತ್ನಿ ಪ್ರೀಯಾ ವಿವೇಕ್,ಓರ್ವ ಪುತ್ರಿ ಸ್ಪಂದನ,ಓರ್ವ ಪುತ್ರ ಸಮರ್ಥ್,ಓರ್ವ ಸಹೋದರ ಬೆಳ್ತಂಗಡಿ ವಾಕ್ಇನ್ ಸ್ಟೈಲ್ ಮಾಲೀಕರಾದ ಜಯರಾಮ ಬಂಗೇರ,ಇಬ್ಬರು ಸಹೋದರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮಾಜಿ ಶಾಸಕ ಪ್ರಭಾಕರ ಬಂಗೇರ,ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಿತೈಷಿಗಳು ಮೃತರ ಮನೆಗೆ ಧಾವಿಸಿ ಅಂತಿಮ ನಮನ ಸಲ್ಲಿಸಿದರು.

Exit mobile version