Site icon Suddi Belthangady

ಬಳಂಜ: ವಲಯ ತರಬೇತುದಾರ ರಂಜಿತ್ ಹೆಚ್.ಡಿ ಅವರಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ

ಬಳಂಜ: ಸರಕಾರಿ ಪ್ರೌಢಶಾಲೆ ಬಳಂಜದಲ್ಲಿ ವ್ಯಕ್ತಿತ್ವ ವಿಕಾಸನ ತರಬೇತಿ ಕಾರ್ಯಾಗಾರವು ಇತ್ತೀಚೆಗೆ ನಡೆಯಿತು. ಜೆಸಿಐ ಸಂಸ್ಥೆಯ ವಲಯ ತರಬೇತುದಾರ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾದ ರಂಜಿತ್ ಹೆಚ್.ಡಿ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಸುಲೋಚನಾ ನೇರವೇರಿಸಿ ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ ವಹಿಸಿದ್ದರು. ತರಬೇತಿಯನ್ನು 9 ಮತ್ತು 10 ನೇ ತರಗತಿ ಮಕ್ಕಳಿಗೆ ನಡೆಸಿಕೊಡಲಾಯಿತು. ಸುಮಾರು 54 ವಿದ್ಯಾರ್ಥಿಗಳು ತರಭೇತಿಯ ಪ್ರಯೋಜನ ಪಡೆದುಕೊಂಡರು. ಶಿಕ್ಷಕಿ ಸತ್ಯವತಿ ಸ್ವಾಗತಿಸಿದರು. ಶಿಕ್ಷಕಿ ವೀಣಾ ವಂದಿಸಿದರು.

Exit mobile version