Site icon Suddi Belthangady

ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆಯಲ್ಲಿ ಎಕ್ಸೆಲ್ ಪರ್ಬ-2022 ಕಾರ್ಯಕ್ರಮದ ಅಂಗವಾಗಿ ‘ಪರಂಪರಾ ದಿನ’ ಕಾಯ೯ಕ್ರಮ

ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆಯಲ್ಲಿ ಎಕ್ಸೆಲ್ ಪರ್ಬ-2022 ಕಾರ್ಯಕ್ರಮದ ಅಂಗವಾಗಿ ‘ಪರಂಪರಾ ದಿನ’ ಕಾಯ೯ಕ್ರಮ ಎಕ್ಸೆಲ್ ಆವರಣದಲ್ಲಿ ಡಿ.16 ರಂದು ಜರುಗಿತು.

ಆದಿ ಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಕಾವೂರು ಇಲ್ಲಿಯ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಶಾಸಕರು ಪ್ರತಾಪ್ ಸಿಂಹ ನಾಯಕ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಿಲಸೀಮೆಯ ತಿಮ್ಮಣ್ಣರಸ, ಖ್ಯಾತ ವೈದ್ಯರು ಆದ ಡಾ.ಪದ್ಮಪ್ರಸಾದ ಅಜಿಲ ಅವರು ವಹಿಸಿದ್ದರು.

ವೇದಿಕೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಸಂಜೀವ ಮಠಂದೂರು, ಎಕ್ಸೆಲ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಸುಮಂತ್ ಕುಮಾರ್ ಜೈನ್ ಬಿ, ಕಾರ್ಯದರ್ಶಿ ಅಭಿರಾಮ್ ಬಿ.ಎಸ್ ಉಪಸ್ಥಿತರಿದ್ದರು.

Exit mobile version