Site icon Suddi Belthangady

ಪದ್ಮುಂಜ: ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನಕ್ಕೆ ರೂ.1 ಲಕ್ಷ ಮೊತ್ತದ ಡಿಡಿ ಹಸ್ತಾಂತರ

ಪದ್ಮುಂಜ: ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನ ಪದ್ಮುಂಜ ಕ್ಷೇತ್ರದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ರೂ.1 ಲಕ್ಷ ಮೊತ್ತದ ಡಿಡಿಯನ್ನು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಯಶವಂತ್, ದೈವಸ್ಥಾನದ ಆಡಳಿತ ಮೊಕ್ತೇಸರರಾದ ಚಿದಾನಂದ ರಾವ್ ಕೊಲ್ಲಾಜೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ತಾಲೂಕು ಸಮಿತಿ ಅಧ್ಯಕ್ಷರಾದ ಶಾರದಾ ರೈ, ತಾಲ್ಲೂಕು ಸಮಿತಿ ಸದಸ್ಯರಾದ ರಾಜೀವ್ ರೈ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ವಲಯಾಧ್ಯಕ್ಷರಾದ ರಮಾನಂದ ಪೂಜಾರಿ, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಗಾಯತ್ರಿ, ಮಾಜಿ ವಲಯಾಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ, ರವಿರಾಜ್ ಜೈನ್ ಪೊಯ್ಯ, ಜಿತೇಶ್ ಅಡೆಂಜ, ಸದಾಶಿವ ಶೆಟ್ಟಿ ಜೋಗಿ, ವಲಯ ಮೇಲ್ವಿಚಾರಕರಾದ ಪ್ರೇಮ, ಬಂದಾರು ಸೇವಾಪ್ರತಿನಿಧಿ ನಿರಂಜನ್, ಉರುವಾಲು ಸೇವಾಪ್ರತಿನಿಧಿ ಸೀತಾರಾಮ್ ಆಳ್ವಾ, ಪದ್ಮುಂಜ ಸೇವಾಪ್ರತಿನಿಧಿ ತಾರಾ, ಹಾಗೂ ದೈವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Exit mobile version