Site icon Suddi Belthangady

ಗುರುವಾಯನಕೆರೆ ಸ.ಹಿ.ಪ್ರಾ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ , ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯ ಉದ್ಘಾಟನೆ

ಗುರುವಾಯನಕೆರೆ: ದಾನಿಗಳ ನೆರವಿನಿಂದ ಮಾಡಿಸಿದ ಸ್ಮಾರ್ಟ್ ಕ್ಲಾಸ್ , ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಹೆಣ್ಣು ಮಕ್ಕಳ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮ ಸ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಪ್ರತಾಪ್ ಸಿಂಹ ನಾಯಕ್ ಮತ್ತು ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರು, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ತಾರ ಕೇಸರಿ, ಕುವೆಟ್ಟು ಗ್ರಾ.ಪಂ ಪಿ.ಡಿ.ಒ ಗೀತಾ ಆರ್ ಸಾಲಿಯಾನ್, ಸಿ.ಆರ್.ಪಿ ರಾಜೇಶ್ ಆಚಾರ್ಯ, ದಾನಿಗಳಾದ ಹೇಮಂತರಾವ್ ಎರ್ಡೂರು, ಬಿ.ಬಿ.ಎಸ್ ಮಾಲಕರಾದ ಹಾಜೀ ಉಸ್ಮಾನ್ ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಅಧ್ಯಕ್ಷರಾದ ಹಾಜೀ ಅಬ್ದುಲ್ ಲತೀಫ್, ಮುಖ್ಯ ಶಿಕ್ಷಕಿ ಉಮಾ ಎನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಶಿಕ್ಷಕ ವೃಂದ ಎಸ್‌ಡಿಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಊರಿನವರು ಉಪಸ್ಥಿತರಿದ್ದರು.

Exit mobile version