Site icon Suddi Belthangady

ಡಿ 25ರಿಂದ ಜ 3ರವರೆಗೆ ಶ್ರೀ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ದೇವಸ್ಥಾನಕ್ಕೆ ಭೇಟಿ ನೀಡಿ ಪೂರ್ವತಯಾರಿಯ ಬಗ್ಗೆ ಮಾಹಿತಿ ನೀಡಿದ ಶಾಸಕ ಹರೀಶ್ ಪೂಂಜ

ಓಡಿಲ್ನಾಳ: ಶ್ರೀ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಡಿ 25ರಿಂದ ಜ 3ತನಕ ನಡೆಯಲಿದ್ದು ದೇವಸ್ಥಾನದಲ್ಲಿ ನಡೆಯುವ ಕೆಲಸ ಕಾರ್ಯಗಳನ್ನು ವೀಕ್ಷಿಸಲು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜರವರು ಡಿ 6 ರಂದು ಭೇಟಿ ನೀಡಿದರು.

ಬ್ರಹ್ಮಕಲಶೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಆದಷ್ಟು ಬೇಗನೆ ಬಾಕಿ ಉಳಿದ ಕೆಲಸಗಳನ್ನು ಗ್ರಾಮಸ್ಥರನ್ನು ಒಟ್ಟು ಗೂಡಿಸಿ ಪೂರ್ಣ ಗೋಳಿಸುವಂತೆ ಸಮಿತಿ ಪಧಾದಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಜ್ ಪ್ರಕಾಶ್ ಪಡ್ಡೈಲು, ಜೀರ್ಣೋಧ್ಧಾರ ಸಮಿತಿ ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವ್ರಷಭ ಆರಿಗ ಗುತ್ತು, ಬ್ರಹ್ಮಕಲಶೋತ್ಸವದ ಅಲಂಕಾರ ಸಮಿತಿ ಸಂಚಾಲಕ ಲಕ್ಷ್ಮಿ ಕಾಂತ್ ಮೂಡೈಲು, ಕಲಸ ಸಮಿತಿ ಸಂಚಾಲಕ ಸನ್ಮತಿ ಜೈನ್ ಕಲ್ಲಬೆಟ್ಟು, ಸುಚಿತ್ವ ಸಮಿತಿ ಸಂಚಾಲಕ ಸದಾನಂದ ಮೂಲ್ಯ ಪರಾರಿ, ಸ್ವಾಗತ ಸಮಿತಿ ಸಂಚಾಲಕ ಪಿ ಚೆನ್ನಯ ಮೂಲ್ಯ ಪರಾರಿ ಮತ್ತಿತರರು ಉಪಸ್ಥಿತರಿದ್ದರು.

Exit mobile version