Site icon Suddi Belthangady

ಕೆಪಿಸಿಸಿ ಸದಸ್ಯರಾಗಿ ಮೋಹನ್ ಶೆಟ್ಟಿಗಾರ್ ಉಜಿರೆ ಮತ್ತು ಕೇಶವ ಪಿ. ಗೌಡ ನೇಮಕ

ಬೆಳ್ತಂಗಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ(ಕೆಪಿಸಿಸಿ) ಇದರ ಸದಸ್ಯರಾಗಿ‌ ಉಜಿರೆಯ ಉದ್ಯಮಿ ಹಾಗೂ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಮೋಹನ್ ಶೆಟ್ಟಿಗಾರ್ ಮತ್ತು ನ್ಯಾಯವಾದಿ ಹಾಗೂ ಹಿರಿಯ ಕಾರ್ಯಕರ್ತ ಕೇಶವ ಪಿ ಗೌಡ ಇವರು ನೇಮಕಗೊಂಡಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬೆಳ್ತಂಗಡಿಯ ಮಾಜಿ ಶಾಸಕರಾದ ಗಂಗಾಧರ ಗೌಡ ಮತ್ತು ವಸಂತ ಬಂಗೇರ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಈ ನೇಮಕಗೊಳಿಸಿದ್ದಾಗಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ ಗೌಡ ತಿಳಿಸಿದ್ದಾರೆ.

Exit mobile version