Site icon Suddi Belthangady

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಇಲ್ಲಿಂದ ಅದ್ವೈತ ವೇದಾಂತ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನುಪಡೆದ ನಿಡ್ಲೆ ಗ್ರಾಮದ ಪ್ರಜ್ವಲ್ ಜೆ

ನಿಡ್ಲೆ: ನಿಡ್ಲೆ ಗ್ರಾಮದ ಬರೆಂಗಾಯದ ಕಜೆ ಮನೆ ನಿವಾಸಿ ಪ್ರಜ್ವಲ್ ಜೆ ಇವರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಇಲ್ಲಿನ ಅದ್ವೈತ ವೇದಾಂತ ವಿಭಾಗದಲ್ಲಿ ಡಾ.ಗಣೇಶ್ ಈಶ್ವರ ಭಟ್ ಇವರ ಮಾರ್ಗದರ್ಶನವನ್ನು ಪಡೆದು ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

ಇವರು ಜನಾರ್ದನ ಗೌಡ ಮತ್ತು ವೇದಾವತಿ ದಂಪತಿಯ ಸುಪುತ್ರರಾಗಿದ್ದು ಕುಕ್ಕೆ ಸುಬ್ರಹ್ಮಣ್ಯದ ಎಸ್.ಎಸ್. ಪಿ.ಯು. ಕಾಲೇಜ್ ನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರು.


Exit mobile version