Site icon Suddi Belthangady

ಮಡಂತ್ಯಾರು: ಬ್ಯಾಂಕಿಂಗ್ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಮತ್ತು ಪೋಸ್ಟಲ್ ಇನ್ಸೂರೆನ್ಸ್ ನೋಂದಾವಣೆ ಕಾರ್ಯಕ್ರಮ

ಮಡಂತ್ಯಾರು: ಮಡಂತ್ಯಾರು ವರ್ತಕ ಸಂಘದಿಂದ ಬ್ಯಾಂಕಿಂಗ್ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಮತ್ತು ಪೋಸ್ಟಲ್ ಇನ್ಸೂರೆನ್ಸ್ ನೋಂದಾವಣೆ ಕಾರ್ಯಕ್ರಮ ಡಿ. 1 ರಂದು ಮಡಂತ್ಯಾರು ಗ್ರಾಮ ಪಂಚಾಯತ್ ವಠಾರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಮಡಂತ್ಯಾರು ಗ್ರಾಮ ಪಂಚಾಯತ್ ಮಡಂತ್ಯಾರು ಉಪ ಅಂಚೆ ಕಚೇರಿ ಮಾಡ೦ತ್ಯಾರು ಇವುಗಳ ಸಹಕಾರದಿಂದ ಎಲ್ಲಾ ವರ್ತಕರಿಗೆ ಮತ್ತು ಆಸಕ್ತ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ವರ್ತಕರು ಶ್ರೀ ಕ್ಷೇತ್ರ ಪಾರೆಂಕಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಿಠಲ ಶೆಟ್ಟಿ ಮುಡಾ ಯೂರು ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಪ್ರಭಾರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಯೂನಿಯನ್ ಬ್ಯಾಂಕಿನ ರೀಜನಲ್ ಹೆಡ್ ಮಹೇಶ್ ಜೆ. ಸೀನಿಯರ್ ಮ್ಯಾನೇಜರ್ ನೀರಜ್ ಕುಮಾರ್ , ಸಂಜೋಗ್ ಚಂದ್, ವಿಷ್ಣು ಮೋಹನ್ , ಜೆಲ್ವಿನ್ ಜಾನ್ ವಿ , ಶ್ರೀಯಾಸ್, ವೆಂಕಟೇಶ್ ಪೈ ಅವರು ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಈ ಕಾರ್ಯಕ್ರಮವು ಮಡಂತ್ಯಾರು – ಪುಂಜಾಲಕಟ್ಟೆ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ಬಹಳ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಲು ಅನುಕೂಲವಾಯಿತು.ಪೋಸ್ಟಲ್ ಇನ್ಸೂರೆನ್ಸಿನ ನೋಂದಾವಣೆಯು ಬಹಳ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಮೊದಲಿಗೆ ಸಂಘದ ಸದಸ್ಯರಾದ ಉದನೇಶ್ವರ ಭಟ್ ಇವರು ಪ್ರಾರ್ಥನೆಯನ್ನು ಮಾಡಿದರು .ಸಂಘದ ಅಧ್ಯಕ್ಷರಾದ ಜಯಂತ್ ಶೆಟ್ಟಿ ಬಿ ಇವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರು ಯೋಗೀಶ್ ಕಡ್ತಿಲ ,ಕಾರ್ಯಕಾರಿ ಸಮಿತಿ ಸದಸ್ಯರಾದ ಕಿಶೋರ್ ಶೆಟ್ಟಿ ಮೂಡಾಯೂರು ಇವರು ಎಲ್ಲರನ್ನೂ ವಂದಿಸಿದರು. ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು.

Exit mobile version