Site icon Suddi Belthangady

ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂಡೂರುಪಳಿಕೆ ಹಾಗೂ ಗ್ರಾಮ ಪಂಚಾಯತ್ ಕೊಕ್ಕಡ ವತಿಯಿಂದ ಸ್ವಚ್ಛತಾ ಕಾರ್ಯ

ಕೊಕ್ಕಡ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂಡೂರುಪಳಿಕೆ ಹಾಗೂ ಗ್ರಾಮ ಪಂಚಾಯತ್ ಕೊಕ್ಕಡ ಇದರ ಸಹಭಾಗಿತ್ವದೊಂದಿಗೆ ಮುಂಡೂರು ಪಳಿಕೆ ಭಾಗದ ಸ್ವಯಂಸೇವಕರು ಸೇರಿ ಆ ಭಾಗದ ವಾಹನ ಸವಾರರಿಗೆ ಅನುಕೂಲವಾಗುವಂತೆ ಅಡೈ ಬಸ್ಸು ನಿಲ್ದಾಣದಿಂದ ಮುಂಡೂರುಪಳಿಕೆ ಶಾಲೆಯವರೆ ರಸ್ತೆ ಬದಿಯ ಎರಡು ಇಕ್ಕೆಲಗಳಲ್ಲಿ ತುಂಬಿದ್ದ ಗಿಡ ಘಂಟಿಗಳನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗಿಶ್ ಆಲಂಬಿಲ, ಉಪಾಧ್ಯಕ್ಷೆ ಪವಿತ್ರ ಗುರು ಪ್ರಸಾದ್ , ಪಂಚಾಯತ್ ಸದಸ್ಯರಾದ ಜಗದೀಶ್ ಕೆಂಪಕೋಡಿ, ಪ್ರಭಾಕರ್ ಮಲ್ಲಿಗೆಮಜಲು, ಪ್ರಮಿಳ ಗಣೇಶ್ ಮತ್ತು ವಿಶ್ವನಾಥ ಕಕ್ಕುದೋಳಿ ಭೇಟಿ ನೀಡಿದರು.

Exit mobile version