Site icon Suddi Belthangady

ಸುಬ್ರಹ್ಮಣ್ಯದಲ್ಲಿ ಪಿಡಿಒ ಯು.ಡಿ.ಶೇಖರ್ ಪಾರ್ಥಿವ ಶರೀರದ ಅಂತಿಮ ದರ್ಶನ

 

 

ಮೆರವಣಿಗೆಯಲ್ಲಿ ಸಾಗಿ ಸಾವಿರಕ್ಕೂ ಅಧಿಕ ಜನರಿಂದ ಅಂತಿಮ ನಮನ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿದ್ದ ಅರಂತೋಡು ಗ್ರಾಮದ ಉಳುವಾರು ಯು.ಡಿ.ಶೇಖರ್ ರವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು ಅವರ ಪಾರ್ಥೀವ ಶರೀರವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆವರಣಕ್ಜೆ ತರಲಾಗಿದ್ದು ಅಲ್ಲಿ ಸಾವಿರಕ್ಕೂ ಜನರು ಅಂತಿಮ ದರ್ಶನ ಪಡೆದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಹಲವು ವರ್ಷಗಳ ಕಾಲ ಇವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಇವರು ಸೇವೆ ಸಲ್ಲಿಸಿದ್ದು ಪ್ರಸ್ತುತ ಕರ್ತವ್ಯದಲ್ಲಿದ್ದರು.
ಕಡಬ ತಹಶಿಲ್ದಾರ್ ರಮೇಶ್ ಬಾಬು, ಪುತ್ತೂರು ತಾ.ಪಂ ಕಾರ್ಯನಿರ್ವಣಾಧಿಕಾರಿ ನವೀನ್ ಭಂಡಾರಿ, ಸುಬ್ರಹ್ಮಣ್ಯ ಗ್ರಾಂ.ಪಂ ಅಧ್ಯಕ್ಷೆ ಲಲಿತ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಸದಸ್ಯರುಗಳಾದ ರಾಜೇಶ್ ಎನ್ ಎಸ್,’ ಹರೀಶ್ ಇಂಜಾಡಿ, ಗಿರೀಶ್ ಪೈಲಾಜೆ, ಶಿವರಾಮ ನೆಕ್ರಾಜೆ, ದಿವ್ಯ, ಭವ್ಯ, ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಗಣೇಶ್ ಪ್ರಸಾದ್, ಸುಬ್ರಹ್ಮಣ್ಯ ಎಸ್ ಐ ಮಂಜುನಾಥ್ , ಎ ಎಸ್ ಐ ಕರುಣಾಕರ, ಐನೆಕಿದು ಸೊಸೈಟಿಯ ಕಾರ್ಯನಿರ್ವಣಾಧಿಕಾರಿ ಪ್ರಕಾಶ್ ಕೆ ಎಸ್, ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ ಟಿ, ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಉದ್ಯಮಿ ಹರೀಶ್ ಕಾಮತ್, ಯಜ್ಞೇಶ್ ಆಚಾರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇಂಜಿನಿಯರ್ ಉದಯಕುಮಾರ್, ಮೋಹನ್‌ದಾಸ್ ರೈ, ರವೀಂದ್ರ ರುದ್ರಪ್ಪಾದ, ಶಿವರಾಮ ರೈ, ಕೆ ಆರ್ ಶೆಟ್ಟಿಗಾರ್, ದಿನೇಶ್ ಬಿ ಎನ್, ಗೋಪಾಲ ಎಣ್ಣೆಮಜಲು, ವಿಶ್ವನಾಥ ನಡುತೋಟ, ಮಾದವ ದೇವರಗದ್ದೆ, ಮನೋಹರ ನಾಳ, ನಾರಾಯಣ ಅಗ್ರಹಾರ, ಎಚ್ ಎಲ್ ವೆಂಕಟೇಶ್, ಮಣಿ ಮುಂಡೋಡಿ, ರತ್ನಾಕರ ಶೆಟ್ಟಿ, ಪ್ರಶಾಂತ್ ಕೋಡಿಬೈಲು, ತಿಲಕೇಶ್ ಮತ್ತಿತರರು ಉಪಸ್ಥಿತರಿದ್ದರು. ಸೊಸೈಟಿಯ ಸಂಘದ ನಿರ್ದೇಶಕರು,ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾ.ಪಂ ಸಿಬ್ಬಂದಿಗಳು, ಸುಬ್ರಹ್ಮಣ್ಯ ವರ್ತಕರು ಸೇರಿದಂತೆ ನೂರಾರು ಜನ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.

 

 

 

 

 

 

Exit mobile version