Site icon Suddi Belthangady

ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಟ್ಟ : ಪದಾಧಿಕಾರಿಗಳ ಆಯ್ಕೆ 

 

ಯಾದವ ಸಭಾ ತಾಲೂಕು ಸಮಿತಿ ಇದರ 10 ನೇ ಯ ಪ್ರಾದೇಶಿಕ ಸಮಿತಿಯು ಬೆಟ್ಟ ರಾಮಚಂದ್ರ ಮಣಿಯಾಣಿಯವರ ಮನೆಯಲ್ಲಿ ನಡೆಯಿತು. ನಂತರ ಪ್ರಾದೇಶಿಕ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷರಾದ ಕರುಣಾಕರ ಹಾಸ್ಪಾರೆಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಚಂದ್ರಹಾಸ ಕೀಲಾರುಕಜೆ, ಕಾರ್‍ಯದರ್ಶಿಯಾಗಿ ಜಗನ್ನಾಥ ಹೈದಂಗೂರು, ಕೋಶಾಧಿಕಾರಿಯಾಗಿ ಅಶೋಕ್ ಕೀಲಾರುಕಜೆ, ಉಪಾಧ್ಯಕ್ಷರಾಗಿ ಲಕ್ಷ್ಮಣ ಬೊಳ್ಳಾಜೆ, ಕೃಷ್ಣ ಕೊಡಪಾಲ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಚೆನ್ನಡ್ಕ, ಸದಸ್ಯರಾಗಿ ಉಮೇಶ್ ನಿಂತಿಕಲ್ಲು, ಶ್ರೀಧರ ಬೊಳ್ಳಾಜೆ, ಗೋಪಾಲಕೃಷ್ಣ ಬೊಳ್ಳಾಜೆ, ಕೃಷ್ಣ ಮಣಿಯಾಣಿ ಬೊಳ್ಳಾಜೆ, ದಿನೇಶ್ ಕೀಲಾರುಕಜೆ, ಗೋಪಾಲಕೃಷ್ಣ ಬೆಟ್ಟ, ತ್ರಿಶಾ ನಿಂತಿಕಲ್ಲು ಇವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಕೇಂದ್ರ ಸಮಿತಿ ಸಲಹಾ ಸಮಿತಿ ಸದಸ್ಯೆ ಜಯಕೃಷ್ಣ ಕಾಯರ್ತೋಡಿ, ತಾಲೂಕು ಸಮಿತಿ ಮಹಿಳಾ ಘಟಕದ ಕಾರ್ಯದರ್ಶಿ ಚಂಚಲಾಕ್ಷಿ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯವೈಖರಿ ಬಗ್ಗೆ ಜಯಕೃಷ್ಣ ಕಾಯರ್ತೋಡಿ ಮಾತನಾಡಿದರು. ಸಂಘಟನೆಯ ಬಗ್ಗೆ ತಾಲೂಕು ಸಮಿತಿಯ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಸಭೆಗೆ ತಿಳಿಸಿದರು. ಅಶೋಕ್ ಕೀಲಾರುಕಜೆ ಸ್ವಾಗತಿಸಿ ವಂದಿಸಿದರು.

Exit mobile version