Site icon Suddi Belthangady

ಬಾಲಕಿ ನಾಪತ್ತೆ ಪ್ರಕರಣ : ಉಜಿರಡ್ಕದ ಸ್ವಾಮಿ ಕೊರಗಜ್ಜ ಕಾರಣಿಕಕ್ಕೆ ಒಲಿದ ಬಾಲಕಿ

ನಾಲ್ಕೂರು ಗ್ರಾಮದ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಉಜಿರಡ್ಕ ಕಳೆದ ಹಲವು ವರ್ಷಗಳಿಂದ ದಿನನಿತ್ಯ ಪೂಜೆ ಸಂಕ್ರಾಂತಿ ಕಾಲದಲ್ಲಿ ಅಗೇಲು ಸೇವೆ ನಡೆಸಿಕೊಂಡು ಬರುತಿದ್ದು ಮೊನ್ನೆ ದಿನ ಕಾರಣಿಕ ಘಟನೆ ನಡೆದಿರುವುದು ವರದಿಯಾಗಿದೆ.

ರಾಜ್ಯದಲ್ಲಿಯೇ ಸುದ್ದಿ ಮಾಡಿದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಇಲ್ಲಿನ ಜಗನ್ನಾಥ್ ರೇಖಾ ದಂಪತಿಯ ಪುತ್ರಿಯಾದ ಭಾರ್ಗವಿ ಎಂಬ ಬಾಲಕಿಯು ನಾಪತ್ತೆಯಾಗಿದ್ದಳು. ಈ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಯುವತೇಜಸ್ಸು ಟ್ರಸ್ಟ್ ಇದರ ಕಾರ್ಯಕರ್ತರಾದ ನಿತಿನ್ ಭಟ್ ನೂಚಿಲ ಹಾಗೂ ಸುಹಾಸ್ ನೂಚಿಲ ಅವರ ಮನೆಯವರು ಅ. ೧೯ ರಂದು ಉಜಿರಡ್ಕ ಸಾನಿಧ್ಯದಲ್ಲಿ ಬಂದು ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿ ಆ ದಿನ ಕಾಣೆಯಾದ ಬಾಲಕಿಯು ಸಂಜೆ ಸೂರ್ಯ ಅಸ್ತಮಿಸುವುದರೊಳಗೆ ಸಿಕ್ಕಿದಲ್ಲಿ ೪೮ದಿನದ ಒಳಗಡೆ ಕೊರಗಜ್ಜನಿಗೆ ಹರಕೆಯ ರೂಪದಲ್ಲಿ ನರ್ತನ ಸೇವೆ ಕೊಡುವುದಾಗಿ ಪ್ರಾರ್ಥಿಸಿದ್ದರು.  

ಅದೇ ದಿನ ಉಜಿರಡ್ಕ ಸಾನಿಧ್ಯದಲ್ಲಿ ಸಂಜೆ ಪೂಜೆ ಒಳಗಾಗಿ ಕೊರಗಜ್ಜನ ಪವಾಡ ಎಂಬಂತೆ ಬಾಲಕಿಯು ಗೋವಾದಲ್ಲಿ ಪತ್ತೆಯಾಗಿದ್ದಳು. ಅದರಂತೆ ಅ. 30 ರಂದು ಬಾಲಕಿ ಹಾಗೂ ಕುಟುಂಬಸ್ಥರು ಉಜಿರಡ್ಕ ಸಾನಿಧ್ಯಕ್ಕೆ ಬಂದು ಕೊರಗಜ್ಜನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಾನಿಧ್ಯದ ಆಡಳಿತದ ಚಿನ್ನಮ್ಮ ಉಜಿರಡ್ಕ, ಸುರೇಶ್ ಉಜಿರಡ್ಕ ಹಾಗೂ ಚರಣ್ ರಾಜ್ ಉಜಿರಡ್ಕ ಮತ್ತಿತರರು ಉಪಸ್ಥಿತರಿದ್ದರು.

 

Exit mobile version