Site icon Suddi Belthangady

ಜಾಲ್ಸೂರು : ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ 46ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

 

ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ಡಿ. 3  ರಂದು ಜರುಗಲಿರುವ 46ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಅ.30ರಂದು ಭಜನಾ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.

ಮೋಹನ ನಂಗಾರು ಹಾಗೂ ನಿಶಾಂತ್ ಮೋಂಟಡ್ಕ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಎಸ್. ಬಾಬು ಪಾಟಾಳಿ ಅರಿಯಡ್ಕ, ಕಾರ್ಯದರ್ಶಿ ಜೆ. ಮೋಹನ ಜಾಲ್ಸೂರು, ಮಾದವ ಗೌಡ ಕಾಳಮನೆ, ಆತ್ಮಾನಂದ ಗಬ್ಬಲಡ್ಕ, ಕಮಲಾಕ್ಷ ನಂಗಾರು, ಧರ್ಮಪಾಲ ಕೆಮನಬಳ್ಳಿ, ಐ.ಕೆ. ಹೇಮಚಂದ್ರ ಕದಿಕಡ್ಕ, ಎನ್.ಎಂ. ಸತೀಶ್ ಕೆಮನಬಳ್ಳಿ, ವಿಷ್ಣುಭಟ್ ಪೆರಂಬಾರು, ಎಂ.ಎಸ್. ಶ್ಯಾಮ್ ಕುಮಾರ್ ಮರಸಂಕ, ಅನಂತಪದ್ಮನಾಭ ಭಟ್, ತಿಮ್ಮಯ್ಯ ಆಚಾರಿ, ದಾಮೋದರ ಎಂ., ಗೋಪಾಲ ಶೇಟ್, ಜಯರಾಮ, ಶರತ್ ಐ.ಕೆ. ನಂದಕಿಶೋರ್ ಬನಾರಿ, ಬಾಲಕೃಷ್ಣ ಮಣಿಯಾಣಿ ಮರಸಂಕ, ಗಿರೀಶ್ ಮರಸಂಕ, ಸರಸ್ವತಿ, ಗಿರಿಜ, ಸೀತು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಲದ ಏಕಾಹ ಭಜನಾ ಮಹೋತ್ಸವದಲ್ಲಿ ಕುಣಿತ ಭಜನೆಯು ವಿಶೇಷ ಆಕರ್ಷಣೆಯಾಗಿ ಇರಲಿದೆ.

Exit mobile version