Site icon Suddi Belthangady

ಬೆಳ್ಳಾರೆಯಲ್ಲಿ ಪಂಚಮುಖಿ ಪ್ರಿಂಟ್ ಪಾಯಿಂಟ್ ಶುಭಾರಂಭ

 

ಬೆಳ್ಳಾರೆಯ ಕಾಮಧೇನು ಟವರ್ಸ್ ನಲ್ಲಿ ನೂತನವಾಗಿ ಪ್ರಕಾಶ್ ಅಳ್ಪೆ ರವರ ಮಾಲಿಕತ್ವದಲ್ಲಿ ಪಂಚಮುಖಿ ಪ್ರಿಂಟ್ ಪಾಯಿಂಟ್ ಅ.28 ರಂದು ಶುಭಾರಂಭ ಗೊಂಡಿತು. ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘ(ರಿ.) ಇದರ ಅಧ್ಯಕ್ಷ,ಕಾಮಧೇನು ಟವರ್ಸ್ ಮಾಲಕರಾದ ಮಾಧವ ಗೌಡ ರವರು ದೀಪ ಪ್ರಜ್ವಲನೆ ಗೊಳಿಸಿ ಶುಭ ಹಾರೈಸಿದರು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ , ರಾಮಕೃಷ್ಣ ಪುರಿಯ ಮೊದಲಾದವರು ಉಪಸ್ಥಿತರಿದ್ದರು.ಇದೇ ವೇಳೆ ರಾಷ್ಟ್ರ ಮಟ್ಟದ ಕಬಡ್ಡಿ , ಖೋಖೋ ಕ್ರೀಡಾಪಟು ನಿಕ್ಷಿತಾ ಕರಿಮಜಲು ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಿಪ್ರಸಾದ್ ಕಡೆಪಲ ಪ್ರಾರ್ಥಿಸಿದರು. ಕುಸುಮಾಧರ ಕರಿಮಜಲು ಸ್ವಾಗತಿಸಿದರು.ಗುರುಪ್ರಸಾದ್ ತೋಟ ನಿರೂಪಿಸಿದರು.ಪ್ರಕಾಶ್ ಅಳ್ಪೆ ವಂದಿಸಿದರು.

ನಮ್ಮಲ್ಲಿ
ಫ್ಲೆಕ್ಸ್ ಪ್ರಿಂಟ್, ಕ್ಲೋತ್ ಬ್ಯಾನರ್,‌ಸ್ಟೇಜ್ ಡೆಕೋರೇಷನ್, ಮೊಮೆಂಟೊ, ಟ್ರೋಫಿ, ಸ್ಪೋರ್ಟ್ಸ್ ಐಟಂ,ಮಗ್ ಪ್ರಿಂಟ್, ರಬ್ಬರ್ ಸ್ಟ್ಯಾಂಪ್, ಇನ್ವಿಟೇಶನ್ ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Exit mobile version