Site icon Suddi Belthangady

ಮೊಬೈಲ್ ಅಂಗಡಿ ಉದ್ಯೋಗಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ

 

ಸುಳ್ಯದ ಮೊಬೈಲ್ ಅಂಗಡಿಯೊಂದರ ಉದ್ಯೋಗಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.

ಜಟ್ಟಿಪಳ್ಳ ನಿವಾಸಿ ಕಿರಣ ಎಂಬವರು ತನ್ನ ಮನೆಯಲ್ಲಿ ಟೈಲ್ಸ್ ಕ್ಲಿನರ್ ಲಿಕ್ವಿಡ್ ಸೇವಿಸಿ ಆತ್ಮಹತ್ಯೆ ಗೆ ಯತ್ನ ಮಾಡಿದ್ದಾರೆ.

ಲಿಕ್ವಿಡ್ ಸೇವಿಸಿ ಸುಳ್ಯ ಬಾಳೆಮಕ್ಕಿಯಲ್ಲಿರುವ ಮಿತ್ರರೊಬ್ಬರ ತರಕಾರಿ ಅಂಗಡಿ ತೆರಳಿ ಅಲ್ಲಿ ಕುಸಿದು ಬಿದ್ದರೆನ್ನಲಾಗಿದೆ. ಅಲ್ಲಿಂದ ತರಕಾರಿ ಅಂಗಡಿಯವರು ಸುಳ್ಯ ಸರಕಾರಿ ಆಸ್ಪತ್ರೆ ಕೊಂಡೊಯ್ದುರು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಸ್ಪತ್ರೆ ಕೊಂಡೊಯ್ದು ಮತ್ತೆ ಅಲ್ಲಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Exit mobile version