Site icon Suddi Belthangady

ಜೈ ಕಿಸಾನ್ ಟ್ರೇಡರ್‍ಸ್‌ಗೆ ಭೇಟಿ ನೀಡಿದ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ  ಡಾ| ರೇಣುಕಾ ಪ್ರಸಾದ್ ಕೆ.ವಿ.

 

 

 

 

ಸುಳ್ಯದ ಗಾಂಧಿನಗರದಲ್ಲಿ ನೂತನವಾಗಿ ಪ್ರಾರಂಭವಾದ ಜೈ ಕಿಸಾನ್ ಟ್ರೇಡರ್‍ಸ್ ಕಾಡುತ್ಪತ್ತಿ ಕೇಂದ್ರಕ್ಕೆ ಅಕಾಡೆಮಿ ಆಫ್ ಲಿಬರಲ್ ಎಎಜ್ಯುಕೇಶನ್(ರಿ) ಇದರ ಪ್ರಧಾನ ಕಾರ್ಯದರ್ಶಿಗಳೂ, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರೂ ಆದ ಡಾ| ರೇಣುಕಾ ಪ್ರಸಾದ್ ಕೆ.ವಿ.ಅವರು ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಡಾ|ರೇಣುಕಾ ಪ್ರಸಾದ್ ಕೆ.ವಿ. ಅವರನ್ನು ಅಭಿನಂದಿಸಿದರು. ಅಲ್ಲದೆ ಸಂಸ್ಥೆಯ ಪಾಲುದಾರರನ್ನು ಡಾ|ರೇಣುಕಾ ಪ್ರಸಾದ್ ಕೆ.ವಿ.ಅವರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ|ಉಜ್ವಲ್ ಊರುಬೈಲು, ಅಕಾಡೆಮಿ ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಜೈ ಕಿಸಾನ್ ಟ್ರೇಡರ್‍ಸ್ ಪಾಲುದಾರರಾದ ನವೀನ್ ರೈ ಮೇನಾಲ, ಸುಬೋದ್ ಶೆಟ್ಟಿ ಮೇನಾಲ, ವಿಕ್ರಮ್ ಅಡ್ಪಂಗಾಯ, ತೀರ್ಥಕುಮಾರ್ ಕುಂಚಡ್ಕ ಮತ್ತು ಶಿವರಾಮ ಕಲ್ಪತರು ಮತ್ತು ಮುಕುಂದ ನಾರ್ಕೋಡು ಉಪಸ್ಥಿತರಿದ್ದರು.

 

Exit mobile version