Site icon Suddi Belthangady

ಸುಳ್ಯ : ಶ್ರೀ ಸಾಯಿ ಕ್ಲಿನಿಕ್ ಶುಭಾರಂಭ

ಸುಳ್ಯದ ಶ್ರೀರಾಂ ಪೇಟೆಯ ಕೆದಂಬಾಡಿ ಕಾಂಪ್ಲೆಕ್ಸ್‌ನಲ್ಲಿ ಡಾ.ಸುಧಾಕರ್ ಭಟ್ ಮತ್ತು ಡಾ.ಹಸ್ತಾ ಬಿ. ರವರ ಮಾಲಕತ್ವದ ಶ್ರೀ ಸಾಯಿ ಕ್ಲಿನಿಕ್ ಮನಸ್ತ ನರ ಮಾನಸಿಕ ಚಿಕಿತ್ಸಾ ಮತ್ತು ಸಲಹಾ ಕೇಂದ್ರವು ಅ.20 ರಂದು ಶುಭಾರಂಭಗೊಂಡಿತು.


ಉದ್ಘಾಟನೆಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ದೀಪ ಬೆಳಗಿಸಿ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ.ಸುಧಾಕರ್, ಡಾ.ರಾಧಾಕೃಷ್ಣ ಕ್ಲಿನಿಕ್‌ನಲ್ಲಿ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪದ್ಮಯ್ಯ ಗೌಡ ಬೊಳ್ಳೂರು, ಹರ್ಷಕುಮಾರ್ ಕೊಯಿಂಗೋಡಿ, ರಕ್ಷಿತ್ ಬೊಳ್ಳೂರು, ದೇವಿಪ್ರಸಾದ್, ರಾಮಣ್ಣ ಹಿರಿಯಡ್ಕ, ಸರಕಾರಿ ಆಸ್ಪತ್ರೆ ಸಿಬ್ಬಂದಿ ಹಿಮಲೇಖಾ, ಮತ್ತಿತರರು ಉಪಸ್ಥಿತರಿದ್ದರು.


ಬಾಲಕೃಷ್ಣ ಬೊಳ್ಳೂರು ಸ್ವಾಗತಿಸಿ, ವಂದಿಸಿದರು. ಪದ್ಮಯ್ಯ ಗೌಡ ಬೊಳ್ಳೂರು ಪ್ರಾರ್ಥಿಸಿ, ಡಾ.ಹಸ್ತಾ ಕಾರ್ಯಕ್ರಮ ನಿರೂಪಿಸಿದರು.

Exit mobile version