Site icon Suddi Belthangady

ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲುರವರಿಗೆ ನವರತ್ನ ಕರ್ನಾಟಕ ಪ್ರಶಸ್ತಿ ಪ್ರದಾನ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 16 ನೇಯ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ತಾರಸಿ ತೋಟ ಕೃಷಿಕ, ತಾರಸಿಯಲ್ಲಿ ಭತ್ತದ ಬೆಳೆಯ ಖ್ಯಾತಿಯ ಡಾ. ಕೃಷ್ಣಪ್ಪ ಗೌಡ ಪಡ್ಡಂಬೈಲುರವರಿಗೆ “ನವರತ್ನ” ಕರ್ನಾಟಕ ಪ್ರಶಸ್ತಿ – 2022 ನೀಡಿ ಗೌರವಿಸಲಾಯಿತು.

 

ಈ ಸಂದರ್ಭದಲ್ಲಿ
ಶಾಸಕ ವೇದವ್ಯಾಸ್ ಕಾಮತ್,
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ, ಧರ್ಮದರ್ಶಿ ಹರಿಕೃಷ್ಣ ಪುನರೂರು,  ಸಮ್ಮೇಳನದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಎಸ್ ಹೊಸಮನಿ, ಶ್ರೀಮತಿ ಸತ್ಯಭಾಮ ಹೊಸಮನಿ,
ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಸ್ಮಾರ್ಟ್ ಸಿಟಿ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ಕೆ. ಹರಿಪ್ರಸಾದ್ ರೈ, ಮಂಗಳೂರಿನ ಮುಖ್ಯ ಗ್ರಂಥಾಧಿಕಾರಿ ಶ್ರೀಮತಿ ಗಾಯತ್ರಿ, ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್, ಡಾ. ಸಿಪ್ರಿಯನ್ ಮೊಂತೇರೊ, ಮಹಾವೀರ್ ಜೈನ್ ಮತ್ತಿತರರು ಇದ್ದರು.

Exit mobile version