ಸುಳ್ಯದ ಕುರುಂಜಿಭಾಗ್ನಲ್ಲಿರುವ ಕೆ.ವಿ.ಜಿ.ಆರ್.ಪಿ. ಸ್ವಿಮ್ಮಿಂಗ್ ಪೂಲ್ನಲ್ಲಿ ೧೦ ದಿನಗಳಿಂದ ನಡೆಯುತ್ತಿದ್ದ ದಸರಾ ಈಜು ಶಿಬಿರ ಅ.೧೦ ರಂದು ಸಮಾರೋಪಗೊಂಡಿತು. ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ|ರೇಣುಕಾ ಪ್ರಸಾದ್ ಕೆ.ವಿ. ಯವರ ಆಶಯದಂತೆ, ಈಜುಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ದಸರಾ ಈಜು ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕೆ.ವಿ.ಜಿ.ಐ.ಪಿ.ಎಸ್.ನಪ್ರಾಂಶುಪಾಲ ಅರುಣ್ಕುಮಾರ್, ಈಜುಕೊಳದ ಅಧ್ಯಕ್ಷ ಡಾ|ಕುಸುಮಾಧರ್, ಈಜು ತರಬೇತುದಾರರುಗಳಾದ ಯಶವಂತಕುಮಾರ್ ಮತ್ತು ಫ್ರಾನ್ಸಿನ ಕು|ಸಲೋಮಿ, ಪೋಷಕರು ಹಾಗು ಈಜು ಕೊಳದ ಸಮಿತಿಯ ಸದಸ್ಯರು ಹಾಜರಿದ್ದರು.