Site icon Suddi Belthangady

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೇಯಸ್ ಸೂಟೆಗದ್ದೆ ತೃತೀಯ

 

 

ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ ಶಿಪ್ – 2022, ಕೊಡಗು ಕಪ್ 2022, ಕಲಾಭೂಮಿ ಮಾರ್ಟಲ್ ಆಟ್ಸ್೯ ಅಕಾಡೆಮಿ ಕುಶಾಲನಗರ ಮತ್ತು ಕ್ರೀಡಾ ಭಾರತಿ ಮಂಗಳೂರು ವಿಭಾಗ ಇದರ ಆಶ್ರಯದಲ್ಲಿ ರೈತ ಭವನ ಕುಶಾಲನಗರ ದಲ್ಲಿ ಕರಾಟೆ ಚಾಂಪಿಯನ್‌ ಶಿಪ್ ಸ್ಪರ್ಧೆಯ ಕಟಾ ವಿಭಾಗದಲ್ಲಿ ಸುಳ್ಯ ನೆಹರೂ ಸ್ಮಾರಕ‌ ಮಹಾವಿದ್ಯಾಲಯದ ಪ್ರಥಮ ಬಿ.ಕಾಂ.ವಿದ್ಯಾರ್ಥಿ ಶ್ರೇಯಸ್ ಸೂಟೆಗದ್ದೆ ತೃತೀಯ ಸ್ಥಾನ ಗಳಿಸಿದ್ದಾರೆ.

ಇವರು ಕರಾಟೆ ಗುರು ನಾರಾಯಣ ಆಚಾರ್ಯ ಪೆರ್ನಾಜೆಯವರ ಶಿಷ್ಯ.‌ ಹಾಗೂ ಮರ್ಕಂಜ ಗ್ರಾಮದ ಷಣ್ಮುಖ‌ ಮತ್ತು ಭವ್ಯ ದಂಪತಿಗಳ ಪುತ್ರ.

Exit mobile version