Site icon Suddi Belthangady

ಮುರುಳ್ಯ ಮಿಲ್ಕ್‌ಮಾಸ್ಟರ್ ಸಮೂಹ ಸಂಸ್ಥೆಯಲ್ಲಿ ಆಯುಧ ಪೂಜೆ, ವಾಹನ ಪೂಜೆ

 

 

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದಿ ಮಿಲ್ಕ್ ಮಾಸ್ಟರ್ ಖ್ಯಾತಿಯ ಪಲ್ಲತ್ತಡ್ಕ ರಾಘವ ಗೌಡರ ಸಮೂಹ ಸಂಸ್ಥೆಗಳಾದ ಕ್ಷೀರಾ ಎಂಟರ್‌ಪ್ರೈಸಸ್ ಮತ್ತು ಕ್ಷೀರಾ ಇಂಜಿನಿಯರಿಂಗ್ ವರ್ಕ್ ಶಾಪ್‌ಗಳಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆಯು ಸೆ.೩ ರಂದು ನಡೆಯಿತು. ವೇದಾಮೂರ್ತಿ ಪ್ರಶಾಂತ್ ಪರ್ಲತ್ತಾಯ, ಚಿದಾನಂದ ಉಪಾಧ್ಯಾಯ ಹಾಗೂ ಶಿವರಾಮ ಉಪಾಧ್ಯಾಯರವರು ವೈಧಿಕ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್ ಪಲ್ಲತ್ತಡ್ಕ ಮುರುಳ್ಯ, ಕುಸುಮಾಧರ ಕೇಪಳಕಜೆ, ಶ್ರೀಮತಿ ಮೈನಾ ಕುಸುಮಾಧರ, ಯತೀಶ್ ಪಾಳೋಳಿ, ಶ್ರೀಮತಿ ಮಧು.ಪಿ.ಆರ್, ಜಯಮ್ಮ.ಕೆ.ಎಸ್, ಉಮೇಶ್ ಗೌಡ, ದಾಸಪ್ಪ ಗೌಡ ಪಾಳೋಳಿ, ಬಾಲಕೃಷ್ಣ ಪಾಳೋಳಿ, ಭವಾನಿಶಂಕರ್ ಪಾಳೋಳಿ, ಕುಟುಂಭ ಸದಸ್ಯರು, ಸಿಬ್ಬಂದಿ ವರ್ಗ, ಸ್ಥಳೀಯರು ಉಪಸ್ಥಿತರಿದ್ದರು.

Exit mobile version