Site icon Suddi Belthangady

ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ರಿಗೆ ಸೂಪರ್ ಸಾಧಕಿ ಪ್ರಶಸ್ತಿ

 

ಸ್ವತಂತ್ರ ಮಾನ್ಯತೆ ಪಡೆದ ಶಾಲಾ ಶಿಕ್ಷಕರ ಒಕ್ಕೂಟದ ಪಸ್ಟ್ ಕರ್ನಾಟಕ ಸಂಸ್ಥೆ (ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರ ವೇದಿಕೆ) ಅಕ್ಟೋಬರ್ 1 2022 ರಂದು ಡಾ.ಎಸ್. ರಾಧಾಕೃಷ್ಣನ್ ಅವರ ಸ್ಮರಣಾರ್ಥ ಶಿಕ್ಷಕ್ ಸಮ್ಮಾನ್ 2022 ಅನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ಸೂಪರ್ ಸಾಧಕಿ ಪ್ರಶಸ್ತಿ ಸ್ವೀಕರಿಸಿದರು.

ವಿಧಾನಪರಿಷತ್ ಸದಸ್ಯ ಶ್ರೀ ಪುಟ್ಟಣ್ಣ ಅವರು ಪ್ರಶಸ್ತಿ ಪ್ರದಾನ ಮಾಡಿದರು .

ಡಾ.ಪ್ರಶಾಂತಿ ಶಶಿಕಾಂತ್ ಅವರು ಉಬರಡ್ಕ ಮಿತ್ತೂರು ಗ್ರಾಮದ ರಾಘವ ಬಿ ಮತ್ತು ನಾಗವೇಣಿ ಬಿ.ಆರ್.ಅವರ ಪುತ್ರಿ.

ಈ ಹಿಂದೆ ಅವರು ಎಲ್‌ಡ್ರಾಕ್, ಎಜುಕೇಶನ್ ಟುಡೆಯಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಟೈಮ್ ಟು ಗ್ರೋ ಮಾಧ್ಯಮವು ಇತ್ತೀಚೆಗೆ ಅವರನ್ನು ಪ್ರಮುಖ ಪ್ರಾಂಶುಪಾಲರಾಗಿ ಗೌರವಿಸಿದೆ.

ಪ್ರಸ್ತುತ ಅವರು ಬೆಂಗಳೂರಿನ ಝೆನ್ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ

Exit mobile version