Site icon Suddi Belthangady

ಎಸ್ ವೈ ಎಸ್ ಗಾಂಧಿನಗರ ವತಿಯಿಂದ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ

 

ಎಸ್ ವೈ ಎಸ್ ಗಾಂಧಿನಗರ ಬ್ರಾಂಚ್ ವತಿಯಿಂದ ಮಕ್ಕಾ ಮದೀನಾ ಉಮ್ರಾ ಯಾತ್ರೆ ಕೈಗೊಂಡಿರುವ ಬ್ರಾಂಚ್ ಸದಸ್ಯ ಯಾಖೂಬ್ ಪಂಜಿಕಲ್ಲು ರವರನ್ನು ಬೀಳ್ಕೊಡುಗೆ ಹಾಗೂ ಎಸ್ ಜೆ ಎಂ ದ.ಕ ಜಿಲ್ಲಾ ಮ್ಯಾಗಝೀನ್ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಸಮಿತಿ ಬ್ರಾಂಚ್ ಉಪಾಧ್ಯಕ್ಷ ನಿಝಾರ್ ಸಖಾಫಿ ಮುಡೂರ್ ರವರನ್ನು ಅಭಿನಂದಿಸುವ ಕಾರ್ಯಕ್ರಮ ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸಿದ್ದಿಕ್ ಕಟ್ಟೆಕ್ಕಾರ್ಸ್, ಕಾರ್ಯದರ್ಶಿ ಹಾರಿಸ್ ಸಿ ಎ, ಎಸ್ ವೈ ಎಸ್ ಮುಖಂಡರುಗಳಾದ ಅಬ್ದುಲ್ಲ ಸಕಾಫಿ ಪಾರೆ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬ್ದುಲ್ ಖಾದರ್ ಪೆರಾಜೆ, ಅಹಮದ್ ಗುರುಂಪು, ಆರಿಸ್ ಎಸ್ ಎಚ್, ಮೊಹಮ್ಮದ್ ಪೈಂಟರ್, ಮೊಹಮ್ಮದ್, ಅಬೂಬಕ್ಕರ್ ಮೊದಲಾದವರು ಉಪಸಿತರಿದ್ದರು.

Exit mobile version