Site icon Suddi Belthangady

ಕೊಡಿಯಾಲ : ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಹಾಗೂ ಸಿಐಎಫ್ ಸಾಲ ವಿತರಣೆ

 

ಶ್ರೀ ಗೌರಿ ಸಂಜೀವಿನಿ ಕೊಡಿಯಾಲ ಇದರ ಮಾಸಿಕ ಸಭೆ ಹಾಗೂ
ಸಾಲ ವಿತರಣಾ ಕಾರ್ಯಕ್ರಮವು ಸೆ.29 ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ರೈ ಅಜ್ರಂಗಳ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತರವರು ಯೋಜನೆಯ ಸದುಪಯೋಗ ಪಡೆಯುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಹರ್ಷನ್ ಕೆ.ಟಿ, ಸದಸ್ಯರಾದ ಯಶವಂತಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ, ಕೃಷಿಯೇತರ ಸಂಪನ್ಮೂಲ ವ್ಯಕ್ತಿ ಜಯಲಕ್ಷ್ಮಿ, ಐಇಸಿ ಕೊ ಆರ್ಡಿನೇಟರ್ ಕುಮಾರಿ ನಮಿತಾ, ಒಕ್ಕೂಟದ ಅಧ್ಯಕ್ಷರಾದ ಶ್ರೀ ಮತಿ ಕಮಲಾಕ್ಷಿ, ಕಾರ್ಯದರ್ಶಿ ಹರಿಣಿ, ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಮುಖ್ಯ ಪುಸ್ತಕ ಬರಹಗಾರರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ವಿ ಆರ್ ಪಿ ಗಳು ಭಾಗವಹಿಸಿದ್ದರು.

Exit mobile version