Site icon Suddi Belthangady

ಅರಂಬೂರಿನಲ್ಲಿ ಅಪಘಾತ

ಬೈಕ್ ಸವಾರ ಐಟಿಐ ವಿದ್ಯಾರ್ಥಿ ಮೃತ್ಯು

(ಮೃತ ವಿದ್ಯಾರ್ಥಿ ಪ್ರತೀಕ್)

ಸುಳ್ಯ ಸಮೀಪದ ಪರಿವಾರಕಾನ ಬಳಿ 9.15 ರ ಸುಮಾರಿಗೆ ನಡೆದ ಬೈಕ್ ರಿಕ್ಷಾ ಅಪಘಾತದಲ್ಲಿ ಬೈಕ್ ಸವಾರ ಐಟಿಐ ವಿದ್ಯಾರ್ಥಿ  ಪ್ರತೀಕ್ ಎಂಬವರು ಕೊನೆಯುಸಿರೆಳೆದ ದಾರುಣ ಘಟನೆ ವರದಿಯಾಗಿದೆ.


ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಮಗ ಪ್ರತೀಕ್ ಇಂದು ಬೆಳಿಗ್ಗೆ ಕಲ್ಲುಗುಂಡಿಯಿಂದ ರಾಘವೇಂದ್ರ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ತೇಜಸ್ ಎಂಬ ಯುವಕನ ಜೊತೆ ಬೈಕ್‌ನಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಪರಿವಾರಕಾನದ ತಿರುವೊಂದರಲ್ಲಿ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆಯಿತು. ತೀವ್ರ ಜಖಂಗೊಂಡ ಬೈಕ್ ಸವಾರರಿಬ್ಬರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸಪತ್ರೆಗೆ ತಂದು ದಾಖಲಿಸಿದ್ದು, ಪ್ರತೀಕ್ ಕೊನೆಯುಸಿರೆಳೆದಿದ್ದಾರೆ. ತೀವ್ರ ಜಖಂ ಗೊಂಡಿರುವ ತೇಜಸ್‌ರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Exit mobile version