Site icon Suddi Belthangady

ಡಾ|| ಶಿವಕುಮಾರ್ ಹೊಸೊಳಿಕೆ ಯವರು ವಿ.ಟಿ.ಯು. ರೀಜನಲ್ ಕಛೇರಿ, ಮೈಸೂರು ಇದರ ರೀಜನಲ್ ಡೈರೆಕ್ಟರ್ ಆಗಿ ನೇಮಕ

 


ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ, ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ನೂತನವಾಗಿ ಅಸ್ತಿತ್ವಕ್ಕೆ ಬಂದ ಮಂಗಳೂರು ವಿಭಾಗದ ಕೇಂದ್ರ ಕಛೇರಿಯ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಕುಮಾರ್ ಹೊಸೊಳಿಕೆ ಇವರು ವಿ.ಟಿ.ಯು. ರೀಜನಲ್ ಕಛೇರಿ, ಮೈಸೂರು ವಿಭಾಗದ ರೀಜನಲ್ ಡೈರೆಕ್ಟರ್ ಆಗಿ ನೇಮಕಗೊಂಡಿರುತ್ತಾರೆ. ಈ ಹುದ್ದೆಯಲ್ಲಿ ಯಶಸ್ಸನ್ನು ಗಳಿಸಲಿ ಎಂದು ಡಾ. ರೇಣುಕಾಪ್ರಸಾದ್ ಕೆ.ವಿ, ಪ್ರಧಾನ ಕಾರ್ಯದರ್ಶಿಗಳು ಎ.ಒ.ಎಲ್.ಇ(ರಿ), ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ. ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಅವರು ಶುಭ ಹಾರೈಸಿದರು.

Exit mobile version