Site icon Suddi Belthangady

ಕೇಂದ್ರ ರಬ್ಬರ್ ಮಂಡಳಿಯ ಸದಸ್ಯರಾಗಿ ಮುಳಿಯ ಕೇಶವ ಭಟ್

 

ಭಾರತ ಸರ್ಕಾರವು ಕೇಂದ್ರ ರಬ್ಬರ್ ಮಂಡಳಿಯ ಸದಸ್ಯರನ್ನಾಗಿ ಬಿಜೆಪಿ ಮುಖಂಡ ಮುಳಿಯ ಕೇಶವ ಭಟ್ ಅವರನ್ನು ನೇಮಕ ಮಾಡಿದೆ. ಭಾರತ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯಕ್ತ ಸಂಸ್ಥೆಯಾಗಿರುವ ಈ ರಬ್ಬರ್ ಮಂಡಳಿಯ ಪ್ರಧಾನ ಕಛೇರಿ ಕೇರಲದ ಕೊಟ್ಟಾಯಂ ನಲ್ಲಿದೆ.

ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಐ ಎ ಎಸ್ ಅಧಿಕಾರಿಗಳು, ಪದನಿಮಿತ್ತ ವಿವಿಧ ಇಲಾಖಾಧಿಕಾರಿಗಳು ಇರಲಿದ್ದಾರೆ.
ಮುಳಿಯ ಕೇಶವ ಅವರು ಸುಳ್ಯ ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿರುವ ಮುಳಿಯ ಕೇಶವ ಭಟ್ ಅವರು ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷರಾಗಿದ್ದು ಹಾಲಿ ನಿರ್ದೇಶಕರಾಗಿದ್ದಾರೆ. ದ.ಕ ಜಿಲ್ಲಾ ಬಿಜೆಪಿಯ ಕಾರ್ಯದರ್ಶಿ.

Exit mobile version