Site icon Suddi Belthangady

ದರ್ಖಾಸ್ತು: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

 

ಐವರ್ನಾಡು ಗ್ರಾಮದ ದರ್ಖಾಸ್ತುವಿನಲ್ಲಿ ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.17 ರಂದು ನಡೆದಿದೆ.
ದರ್ಖಾಸ್ತು ರಾಮಚಂದ್ರ ಗೌಡ ಎಂಬವರು ಸಂಜೆ ಮನೆಯಲ್ಲಿ ವಿಷ ಸೇವಿಸಿ‌ ಅಸ್ವಸ್ತರಾಗಿದ್ದು ಅವರನ್ನು ಕೂಡಲೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ನಿಧನರಾದರು.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಮೃತರಿಗೆ 70 ವರ್ಷ ಪ್ರಾಯವಾಗಿದ್ದು ಪುತ್ರ ಬಾಲಕೃಷ್ಣ,ಪುತ್ರಿಯರಾದ ಭಾರತಿ,ದಿವ್ಯ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

Exit mobile version