Site icon Suddi Belthangady

ಸಾಂದೀಪ್ ಶಾಲೆಗೆ ಶಹಜಾನ್ ನಿಲಂಬೂರ್ ನೇತೃತ್ವದ ಗ್ಲೋಬಲ್ ಗೀವರ್ಸ್ ಕರ್ನಾಟಕ ತಂಡ ಭೇಟಿ

ಸುಳ್ಯದ ಗಾಂಧಿನಗರ ನಾವೂರಿನ ಮುನಾಫರ್ ಎಂಬವರ ಮಗಳ ಚಿಕಿತ್ಸೆ ನೆರವು ಯಾಚಿಸಲು ಸುಳ್ಯಕ್ಕೆ ಆಗಮಿಸಿದ ಖ್ಯಾತ ಸಮಾಜ ಸೇವಕ ಗ್ಲೋಬಲ್ ಗಿವರ್ಸ್ ಕರ್ನಾಟಕ ಇದರ ಮುಖ್ಯಸ್ಥ ಶಹಜಾನ್ ನಿಲಂಬೂರ್ ಮತ್ತು ಅವರ ತಂಡ ಸುಳ್ಯ ಎಂ ಬಿ ಫೌಂಡೇಷನ್ ವತಿಯಿಂದ ಕಾರ್ಯಚರಿಸುತ್ತಿದ್ದ ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ಭೇಟಿ ಮಕ್ಕಳ ಮತ್ತು ಶಾಲೆಯ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.


ಸುಳ್ಯ ಉದ್ಯಮಿ ಹಾಜಿ ಇಬ್ರಾಹಿಂ ಕತ್ತಾರ್, ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್,ಗ್ಲೋಬಲ್ ಗೀವರ್ಸ್ ಕರ್ನಾಟಕ ಕಾರ್ಯದರ್ಶಿ ಅನೀಲ್,ಮೊದಲಾದವರು ಉಪಸ್ಥಿತರಿದ್ದರು.
ಗ್ಲೋಬಲ್ ಗೀವರ್ಸ್ ಕರ್ನಾಟಕ ಇದರ ನಿರ್ದೇಶಕ ನಿಝಾಮಿ ಯವರು ಶಹಜಾನ್ ನಿಲಂಬೂರ್ ಅವರ ಚಾರಿಟಿ ಕೆಲಸದ ಬಗ್ಗೆ ಮಾತನಾಡಿದರು.


ಎಂ ಬಿ ಫೌಂಡೇಷನ್ ಅಧ್ಯಕ್ಷ ಶಹಜಾನ್ ನಿಲಂಬೂರ್ ಅವರನ್ನು ಗೌರವಿಸಿ, ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಾಂದೀಪ್ ಶಾಲೆಯ ಸಂಚಾಲಕಿ ಹರಿಣಿ ಸದಾಶಿವ, ಟ್ರಸ್ಟಿ‌ ಶರೀಫ್ ಜಟ್ಟಿಪಳ್ಳ ಇದ್ದರು

Exit mobile version